ಅಮರಪಡ್ನೂರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅಮರಪಡ್ನೂರು ಸ ಉ ಹಿ ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷ ರಾದ ಈಶ್ವರ ಕಾಯರ ಧ್ವಜಾರೋಹಣ ಮಾಡಿದರು.

ಮುಖ್ಯ ಅಥಿತಿಗಳಾಗಿ ಅಮರಮೂಡ್ನೂರು ಗ್ರಾಪಂ.ಉಪಾಧ್ಯಕ್ಷ ರಾದ ಶ್ರೀಮತಿ ಭುವನೇಶ್ವರಿ. ಶ್ರೀಮತಿ ಶೀಲಾವತಿ ಕೊಳಂಬೆ ಸಾಹಿತಿಗಳು, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ರಾದ ಗೋಪಾಲಕೃಷ್ಣ ಪಾಡಾಜೆ ಆಗಮಿಸಿದ್ದರು.

ಸಮಾರಂಭ ದಲ್ಲಿ ದತ್ತಿನಿಧಿಯನ್ನು ವಿತರಿಸಲಾಯಿತು.

ಶಾಲಾಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ಶಾಲಾನಾಯಕಿ ದೃತಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಈಶ್ವರ ಕೆ.ಉಪಾಧ್ಯಕ್ಷ ರಾದ ಗೀತಾ ಕೆ.ಮುಖ್ಯ ಶಿಕ್ಷಕಿ ರೂಪವಾಣಿ. ಉಪಸ್ಥಿತರಿದ್ದರು. ಶಿಕ್ಷಕರಾದ ಶಿವಕುಮಾರ್ ಸ್ವಾಗತಿಸಿ.ರಮ್ಯಾ ವಂದಿಸಿದರು.