ನಿಂತಿಕಲ್ಲು: ಕೆಯಸ್ ಗೌಡ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ

0

ನಿಂತಿಕಲ್ಲಿನ ಕೆಯಸ್ ಗೌಡ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು. ಧ್ವಜಾರೋಹಣವನ್ನು ಕೆ. ಎಸ್ ಕುಮಾರಸ್ವಾಮಿ ನೆರವೆರಿಸಿದರು. ದ್ವಿತೀಯ ಪಿ.ಯು.ಸಿ, ಐಟಿಐ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಪಥಸಂಚನದಲ್ಲಿ ಭಾಗವಹಿಸಿದರು.

ಎಲ್ಲಾ ಸಂಸ್ಥೆಗಳ ಬೋಧಕರು, ಬೋಧಕೇತರ ಸಿಬ್ಬಂದಿಗಳು ಮತ್ತು ಪೋಷಕರು ಜೊತೆಗೂಡಿದರು. ಕಾರ್ಯಕ್ರಮವನ್ನು ಅಜಿತ್ ಐವರ್ನಾಡು ನಿರೂಪಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಯಮುನಾ ಕಾರ್ಜಾ,

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಎಸ್.ಪಿ.ಪಿ.ಐ.ಟಿ.ಐ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಸುಧೀರ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಉಮೇಶ್, ಕಾರ್ಯಕ್ರಮಾಧಿಕಾರಿ ಪ್ರಸನ್ನ ವೈಟಿ ಉಪಸ್ಥಿತರಿದ್ದರು.