ಸುಳ್ಯ ತಾಲೂಕು ಔಷದ ವ್ಯಾಪಾರಿಗಳ ಸಂಘದ ವತಿಯಿಂದ ವೀಲ್ ಚೆಯರ್ ಕೊಡುಗೆ

0

ಸುಳ್ಯ ತಾಲೂಕು ಔಷದ ವ್ಯಾಪಾರಿಗಳ ಸಂಘದ ವತಿಯಿಂದ “ವೀಲ್ ಚೆಯರ್ ” ಕೊಡುಗೆ ಸಮಾರಂಭವು ಆ. 15 ರಂದು ಸುಳ್ಯದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ನಡೆಯಿತು.

ಸುಳ್ಯ ವಾಣಿಜ್ಯ ಮತ್ತು ಕೈಗರಿಕೊದ್ಯಮಿಗಳ ಸಂಘದ ಅಧ್ಯಕ್ಷ ಶ್ರೀ ಪಿ ಬಿ ಸುಧಾಕರ ರೈ ಯವರು ದೀಪ ಪ್ರಜ್ವಲನೆ ಮಾಡಿ,ಸಂಘಟನೆ ಕೊಡಮಾಡಿದ ಎರಡು ವೀಲ್ ಚೆಯರ್ ಗಳನ್ನು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ ಕರುಣಾಕರ ರವರಿಗೆ ಹಸ್ತಾoತರ ಮಾಡಿ.

ಮಾತನಾಡಿದ ಅವರು, ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಹಬ್ಬದ ಆಚರಣೆ ಇಂದು ಆಗಿದೆ. ಜೀವದ ಹಂಗು ತೊರೆದು ದುಡಿಯುವ ವೈದ್ಯರು, ನರ್ಸಿಂಗ್ ಆಫೀಸರ್ಸ್ ಮತ್ತು ಇತರ ಸಿಬ್ಬಂದಿ ಜೊತೆಗೆ ನಾವಿದ್ದೇವೆ ಅಂತ ತೋರಿಸಿಕೊಟ್ಟ ಔಷದ ವ್ಯಾಪಾರಿಗಳ ಸಂಘಕ್ಕೆ ಅಭಿನಂದನೆ ಅಂದರು.

ಆಸ್ಪತ್ರೆ ಪರವಾಗಿ ವೀಲ್ ಚೆಯರ್ ಸ್ವೀಕರಿಸಿ ಮಾತನಾಡಿದ ಡಾ ಕರುಣಾಕರ ರವರು ಸಂಘಟನೆಗೆ ಅಭಿನಂದನೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಜನಾರ್ದನ ಕಣಕ್ಕೂರು ಇವರ ಅಧ್ಯಕ್ಷ ತೆ ಯಲ್ಲಿ ನಡೆದ ಸಭೆಯು,ಕು ಅನಘ ವಿ ಭಟ್ ಇವರ ಪ್ರಾರ್ಥನೆಯೊಂದಿಗೆ ಆರಂಭ ವಾಯಿತು. ಸಂಘದ ಕೋಶಾಧಿಕಾರಿ ಶ್ರೀ ಗಣೇಶ್ ಎಂ ಕೆ ಸ್ವಾಗತಿಸಿ, ಶಶಿಧರ ಪಳಂಗಾಯ ನಿರೂಪಿಸಿ, ವಂದಿಸಿದರು.