ಸಂಪಾಜೆ ಸಹಕಾರಿ ಸಂಘದಿಂದ ಮರಣ ನಿಧಿ ಹಸ್ತಾಂತರ

0


ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿದ್ದು,ಇತ್ತೀಚೆಗೆ ಮೃತಪಟ್ಟ ಪೆಲ್ತಡ್ಕ ಲಕ್ಷ್ಮಣ ಎಸ್ ಪಿ ಅವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ನೀಡಲ್ಪಡುವ ಮರಣ ನಿಧಿ ರೂಪಾಯಿ ಹತ್ತು ಸಾವಿರವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಆನಂದ ಪಿ ಎಲ್, ಸಿಬ್ಬಂದಿಯಾದ ಧನಂಜಯ ಎಂ ಪಿ ರವರು ಹಾಜರಿದ್ದರು.