ಮುಡ್ನೂರು ಮರ್ಕಂಜ ಹಿ.ಪ್ರಾ.ಶಾಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆ ಮತ್ತು ಷರಾ ಪ್ರಕಾಶನದ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

0

ಬೆಂಗಳೂರಿನ ಮಾರುತಿ ಮೆಡಿಕಲ್ಸ್ ಇವರಿಂದ ಕೊಡಮಾಡಿದ ನೋಟ್ ಬುಕ್ಸ್ ವಿತರಣೆ

ಸುದ್ದಿ ಸಮೂಹ ಸಂಸ್ಥೆ, ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂದ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಬೆಂಗಳೂರಿನ ಮಾರುತಿ ಮೆಡಿಕಲ್ಸ್ ವತಿಯಿಂದ‌ ವಿದ್ಯಾರ್ಥಿಗಳಿಗೆ ಕೊಡಮಾಡಿದ ನೋಟ್ ಬುಕ್ಸ್ ವಿತರಣಾ ಕಾರ್ಯಕ್ರಮವು ಮುಡ್ನೂರು ಮರ್ಕಂಜ ಹಿ.ಪ್ರಾ.ಶಾಲೆಯಲ್ಲಿ ಆ.26 ರಂದು ನಡೆಯಿತು.


ಎಸ್‌.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ದೇವರಾಜ್ ಎಸ್.ಕೆ. ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಸುದ್ದಿಯ ಮಿತ್ತಡ್ಕ ಪ್ರತಿನಿಧಿ ಹಾಗೂ ಮುಡ್ನೂರು ಮರ್ಕಂಜ ಶಾಲೆಯ ದತ್ತಿನಿಧಿಗಳಾದ ದಾಮೋದರ ಪಾಟಾಳಿ ಮಿತ್ತಡ್ಕ‌ ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್ ವಿತರಿಸಿದರು.‌ ವೇದಿಕೆಯಲ್ಲಿ ಸುದ್ದಿ ಬಿಡುಗಡೆಯ ವರದಿಗಾರ ದಯಾನಂದ ಕೊರತ್ತೋಡಿ, ಜಯಪ್ರಕಾಶ್ ಭಂಡಾರಿ, ದಿನಕರ ಕಾಳಮ್ಮನೆ ಉಪಸ್ಥಿತರಿದ್ದರು.
ಶಿಕ್ಷಕ‌ ಬೆಳ್ಯಪ್ಪ ಕೋಡ್ತುಗುಳಿ ಸ್ವಾಗತಿಸಿದರು‌‌. ಶಿಕ್ಷಕಿ ಅಶ್ವಿನಿ ಕೊಯನಾಡು ವಂದಿಸಿದರು.


ಪೋಷಕರಾದ ಸಂಧ್ಯಾ ದೋಳ, ಗಂಗಾಧರ ದೋಳ ಮತ್ತು ಶಿಕ್ಷಕರಾದ ಲತಾ ಅರಂತೋಡು, ನಿಶಾ ಕಾಯರ, ಸಾವಿತ್ರಿ ಬೊಮ್ಮಾರು ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.