ಮಿತ್ರದೇವ ಮಡಪ್ಪಾಡಿ ಅವರಿಗೆ ಸೇವಾ ರತ್ನ ಪ್ರಶಸ್ತಿ

0

ಮಂಗಳೂರಿನ ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ವತಿಯಿಂದ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸುಳ್ಯದ ಸಮಾಜ ಸೇವಕ ಮಿತ್ರದೇವ ಮಡಪ್ಪಾಡಿ ಅವರಿಗೆ ಅವರ ಹಲವಾರು ವರ್ಷಗಳಿಂದ ಮಾಡಿದಂತಹ ಸಮಾಜ ಸೇವೆಯ ಸಾಧನೆ ಪರಿಗಣಿಸಿ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.


ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಇದರ ಮುಖ್ಯಸ್ಥರಾದಂತಹ ಸತೀಶ್ ಮೆನನ್ ಅವರು ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹರೇಕಳ ಹಾಜಬ್ಬ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಲಕ್ಷ್ಮಣ್ , ನಿರೂಪಕ ಪ್ರಜ್ವಲ್ ಕಾಂತಾರಾ ಚಿತ್ರ ಖ್ಯಾತಿಯ ನವೀನ್ ಬೊಂದೆಲ್, ಖ್ಯಾತ ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್ ಭೀಮರಾವ್ ವಾಷ್ಠರ್ , ಖ್ಯಾತ ಹಾಸ್ಯ ಭಾಷಣ ಕಾರ್ತಿ ಕವಿತಾ ಸುಧೀಂದ್ರ , ಅನುಷಾ ಉಜಿರೆ ಇನ್ನಿತರ ನಟ ನಟಿ ಗಾಯಕರು ಉಪಸ್ಥಿತರಿದ್ದರು.