ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭವಿತ್‌ಗೆ ಪ್ರಥಮ ಸ್ಥಾನ

0


ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸೌತ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭವಿತ್ ಇವರು ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಮರ್ಕಂಜ ಗ್ರಾಮದ ಗುತ್ತಿಗದ್ದೆ ರಾಘವ ಗೌಡರ ಮೊಮ್ಮಗನಾಗಿರುವ ಇವರು ಕಮಲಾಕ್ಷ ದೇಲಂಪಾಡಿ ಮತ್ತು ವಸಂತಿ ದೇಲಂಪಾಡಿ ಇವರ ಪುತ್ರ. ಎಲಿಮಲೆ ಜ್ಞಾನದೀಪ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿರುವ ಇವರು ಕರಾಟೆ ಗುರುಗಳಾದ ನಾರಾಯಣ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.