ನಾವೂರು : ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ

0

ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಗಾಡಿ ಚರಂಡಿಗೆ ಬಿದ್ದು, ಸವಾರನ ತಲೆ ಮತ್ತು ಕೈ ಕಾಲುಗಳಿಗೆ ಗಾಯಗೊಂಡ ಘಟನೆ ಆಗಸ್ಟ್ ೨೬ರಂದು ಸಂಜೆ ನಾವೂರು ಕೆ ಪಿ ಮುನೀರ್ ರವರ ಮನೆಯ ಮುಂಭಾಗದಲ್ಲಿ ನಡೆದಿದೆ.

ಗಾಂಧಿನಗರ ಅರಣ್ಯ ಇಲಾಖೆ ಕಚೇರಿ ಪರಿಸರದ ನಿವಾಸಿ ಆನಂದ ಎಂಬ ಯುವಕ ನಾವೂರು ಕಡೆಯಿಂದ ಸಂತೋಷ್ ಟಾಕೀಸ್ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭ ಸ್ಕೂಟಿ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಚರಂಡಿಗೆ ಬಿದ್ದಿದೆ. ಘಟನೆಯಿಂದ ಸವಾರ ಕೂಡ ಚರಂಡಿಗೆ ಬಿದ್ದಿದ್ದು ಆತನ ತಲೆ ಮತ್ತು ಕೈ ಕಾಲುಗಳಿಗೆ ಗಾಯವಾಗಿ ಚರಂಡಿಯಿಂದ ಹೊರ ಬಾರದೆ ಬಾಕಿಯಾಗಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೆ ಸ್ಥಳಕ್ಕೆ ಬಂದು ಆತನನ್ನು ಮೇಲೆತ್ತಿ ಅಂಬುಲೆನ್ಸ್ ವಾಹನಕ್ಕೆ ಕರೆ ಮಾಡಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು,. ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ.