ಐವರ್ನಾಡು ಗೆಳೆಯರ ಬಳಗ ದೇರಾಜೆ ವತಿಯಿಂದ ಬೆನ್ನಿದ ನೆಲ ಗೊಬ್ಬುದ ಕಲ – ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆ

0

ಐವರ್ನಾಡು ಗೆಳೆಯರ ಬಳಗ ದೇರಾಜೆ ವತಿಯಿಂದ 2 ನೇ ವರ್ಷದ ಬೆನ್ನಿದ ನೆಲ ಗೊಬ್ಬುದ ಕಲ ಕೆಸರುಗದ್ದೆ ಕ್ರೀಡಾಕೂಟವು ಆ.27 ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಉದ್ಘಾಟನೆಗೊಂಡಿತು.

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ರವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭಹಾರೈಸಿದರು. ಗೆಳೆಯರ ಬಳಗದ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ಗ್ರಾ.ಪಂ.ಸದಸ್ಯರಾದ ಎನ್.ಎಸ್.ದೇವಿಪ್ರಸಾದ್, ಶ್ರೀಮತಿ ಸುಜಾತ ಪವಿತ್ರಮಜಲು, ನಳಿನಿ ಕೋಡ್ತೀಲು, ದೇರಾಜೆ ಗೆಳೆಯರ ಬಳಗದ ಗೌರವ ಸಲಹೆಗಾರ ನಂದಕುಮಾರ್ ಬಾರೆತ್ತಡ್ಕ,ಹಿರಿಯರಾದ ಮಾಧವ ಭಟ್ ಶೃಂಗೇರಿ, ರಾಮಚಂದ್ರ ಗೌಡ,ಗೆಳೆಯರ ಬಳಗದ ಕಾರ್ಯದರ್ಶಿ ಅನಿಲ್ ದೇರಾಜೆ ಉಪಸ್ಥಿತರಿದ್ದರು.


ಅಜಿತ್ ಐವರ್ನಾಡು ಸ್ವಾಗತಿಸಿ, ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿ, ದೇವಿಪ್ರಸಾದ್ ಕೊಪ್ಪತ್ತಡ್ಕ ವಂದಿಸಿದರು.
ಪುರುಷರಿಗೆ ಹ್ಯಾಂಡ್ ಬಾಲ್, ವಾಲಿಬಾಲ್ , ಹಗ್ಗಜಗ್ಗಾಟ (ಮುಕ್ತ) ಬುಗರಿ ಓಟ, ಸಾರ್ವಜನಿಕರಿಗೆ ನಿಧಿ ಶೋಧ, ಮಹಿಳೆಯರಿಗೆ ಹ್ಯಾಂಡ್ ಬಾಲ್, 100 ಮೀ .ಓಟ, ಹಗ್ಗಜಗ್ಗಾಟ (ಮುಕ್ತ)
ಬುಗರಿ ಓಟ ನಡೆಯಲಿದೆ.
ಮಕ್ಕಳಿಗೆ ಓಟ, ಜೋಡಿ ಓಟ ನಡೆಯಲಿದೆ.