ಮರಾಟಿ ಸಮಾಜ ಸೇವಾ ಸಂಘದ ಜಾಲ್ಸೂರು ಗ್ರಾಮ ಸಮಿತಿಯಿಂದ ಅಗ್ನಿವೀರ್ ಕಿಶೋರ್ ಶೇಷನಡ್ಕರಿಗೆ ಸನ್ಮಾನ

0

ಜಾಲ್ಸೂರು ಗ್ರಾಮದ ಶೇಷನಡ್ಕ ಕೃಷ್ಣಪ್ಪ ನಾಯ್ಕ ಹಾಗೂ ಶ್ರೀಮತಿ ಪ್ರೇಮ ದಂಪತಿಯ ಪುತ್ರ ಕಿಶೋರ್ ಶೆಷನಡ್ಕ ಅಗ್ಲಿವೀರ್ ತರಬೇತಿ ಪೂರ್ತಿಗೊಳಿಸಿ ಊರಿಗೆ ಆಗಮಿಸಿದ ಸಂದರ್ಭದಲ್ಲಿ ಇವರಿಗೆ ಜಾಲ್ಸೂರು ಗ್ರಾಮದ ಅಡ್ಕಾರು, ವಿನೋಬನಗರದಲ್ಲಿರುವ ಮರಾಟಿ ಸಮಾಜ ಸೇವಾ ಸಂಘ, ಜಾಲ್ಸೂರು ಗ್ರಾಮ ಸಮಿತಿ ವತಿಯಿಂದ ಆ. 27ರಂದು ಸನ್ಮಾನಿಸಿ ಗೌರವಿಸಲಾಯಿತು ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶಿವಪ್ಪ ಕಜಗದ್ದೆ, ಕಾರ್ಯದರ್ಶಿ ಭೋಜಪ್ಪ ನಾಯ್ಕ ವಿನೋಬನಗರ ಉಪಸ್ಥಿತರಿದ್ದರು. ದಾಮೋದರ ನಾಯ್ಕ ಮಹಾಬಲಡ್ಕ ಸ್ವಾಗತಿಸಿದರು. ಕು. ಅಶ್ವಿತಾ ಪ್ರಾರ್ಥಸಿದರು. ಸಂಘದ ಸದಸ್ಯ ಕೃಷ್ಣಪ್ಪ ನಾಯ್ಕ ಜಾಲ್ಸೂರು ಕಿಶೋರ್ ಕುಮಾರ್ ರನ್ನು ಪರಿಚಯಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.