ಅಲೆಕ್ಕಾಡಿ : 23ನೇ ಗಣೇಶೋತ್ಸವ ಸಮಿತಿ ರಚನೆ

0

ಮುರುಳ್ಯ ಅಲೆಕ್ಕಾಡಿ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವು ಸೆ.19ರಂದು ನಡೆಯುವ ಪ್ರಯುಕ್ತ ಸಮಿತಿ ರಚನೆಗೊಂಡಿರುತ್ತದೆ.

ಆ.20ರಂದು ಗಣೇಶೋತ್ಸವ ಸಮಿತಿಯ ವಾರ್ಷಿಕ ಸಭೆಯಲ್ಲಿ ನಾವೂರು ಬಾಲಕೃಷ್ಣರವರ ಅಧ್ಯಕ್ಷತೆ ಸಭೆ ನಡೆಯಿತು. ಪ್ರಮುಖರಾದ ಬಾಲಕೃಷ್ಣ ಪೂಜಾರಿ ನೂಜಾಡಿ, ಕೃಷ್ಣಪ್ಪ ಗೌಡ ಪೂದೆ, ಸುಮಂತ ಅಲೆಕ್ಕಾಡಿ, ಅನುರಾಜ್ ಬಿ. ಸಿ, ಐತ್ತಪ್ಪ ಅಲೆಕ್ಕಾಡಿಯವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರಾಗಿ ವಸಂತ ಗೌಡ ಪೂದೆ, ಕಾರ್ಯದರ್ಶಿಯಾಗಿ ಪ್ರದೀಪ್ ಕರಿಂಬಿಲ,

ಉಪಾಧ್ಯಕ್ಷರಾಗಿ ಗುನೀತ್ ಪೂದೆ, ಜೊತೆ ಕಾರ್ಯದರ್ಶಿ ಪೃಥ್ವಿ ರೈ ಅಲೆಕ್ಕಾಡಿ, ಖಜಾಂಚಿ ಆನಂದ ಅಲೆಕ್ಕಾಡಿಯವರು ಆಯ್ಕೆಯಾದರು. ಸುಮಾರು 38 ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.