ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ -ರಜತ ಸಂಭ್ರಮ

0

ಕೇನ್ಯದಲ್ಲಿ ಗ್ರಾಮ ಸಮಿತಿಯ ಪೂರ್ವಭಾವಿ ಸಭೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ -2023 ರಜತ ಸಂಭ್ರಮ ಸೆ.19ರಿಂದ ಸೆ.21ತನಕ

ವಿಜೃಂಭಣೆಯಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಆ ಪ್ರಯುಕ್ತ ಕೇನ್ಯ ಗ್ರಾಮ ಸಮಿತಿಯ ಪೂರ್ವಭಾವಿ ಸಭೆಯು ಕೇನ್ಯ ಗ್ರಾಮ ಸಮಿತಿಯ ಸಂಚಾಲಕ ವಾಸುದೇವ ಮೇಲ್ಪಾಡಿ ರವರ ನೇತೃತ್ವದಲ್ಲಿ ಕಾಯರ್ತಡ್ಕ ಮತ್ತು ಕೇನ್ಯ ಹಾಲು ಉತ್ಪಾದಕರ ಸಂಘದ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು, ಉಪಾಧ್ಯಕ್ಷ ಸಂತೋಷ್ ಜಾಕೆ,ಆರ್ಥಿಕ ಸಮಿತಿಯ ಸಂಚಾಲಕ ಪುರುಷೋತ್ತಮ ದಂಬೆಕೋಡಿ, ಕೋಶಾಧಿಕಾರಿ ಸುಬ್ಬಪ್ಪ ಗೌಡ ಕಲ್ಲುಗುಂಡಿ, ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ, ಹಾಗೂ ಆರಾಧನಾ ಸಮಿತಿಯ ಜೊತೆ ಕಾರ್ಯದರ್ಶಿ ನಾಗಮಣಿ ಕೆದಿಲ ಮತ್ತು ಕೇನ್ಯ ಗ್ರಾಮ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.