ಕು. ಗೌರಿತಾ ಕೆ.ಜಿ.ಯವರಿಗೆ ಯೋಗರತ್ನ ಡಾ. ರಾಜ್ ಕುಮಾರ್ ಪ್ರಶಸ್ತಿ ಪ್ರದಾನ

0

ವರ್ಲ್ಡ್ ರೆಕಾರ್ಡ್ ಹೋಲ್ಡರ್
ಕು. ಗೌರಿತಾ ಕೆ.ಜಿ. ಯವರಿಗೆ ಯೋಗರತ್ನ ಡಾ. ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆ. 27ರಂದು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ. ಟಿ.ಎಸ್. ನಾಗಾಭರಣ, ಹರಿದಾಸ ಸಾಹಿತ್ಯದ ಪಿತಾಮಹ ವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ, ಸಾಹಿತಿಗಳು ಹಾಗೂ ವಿವಿಧ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕು. ಗೌರಿತಾ ಕೆ.ಜಿ ಕುಮಾರಸ್ವಾಮಿ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಸಂಪಾಜೆ ಕಳಗಿ ಡಾ. ಗೌತಮ್ ಕೆ. ವಿ. ಮತ್ತು ಡಾ. ರಾಜೇಶ್ವರಿ ಎಂ.ಎಂ ದಂಪತಿಯ ಪುತ್ರಿ. ಗೌರಿತಾ ಕೆ.ಜಿ ಯವರ ತಾತ
ಎಂ. ಮೇದಪ್ಪ ಗೌಡ, ಅಜ್ಜಿ
ಯನ್.ಕೆ ಭುವನೇಶ್ವರಿ ಸಹೋದರಿ ರಂಗಿತಾ ಕೆ.ಜಿ, ತಾಯಿ ರಾಜೇಶ್ವರಿ ಎಂ.ಎಂ, ಮಾವ ಯಶ್ವಿತ್, ಅತ್ತೆ ವಾರಿಧಿ ಯನ್. ಕೆ, ಚಿಕ್ಕಪ್ಪ ಶ್ರೀನಿಧಿ ಯನ್. ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.