ಜೇಸೀ ಸಪ್ತಾಹ ಜೈತ್ರ 2023 ಸಮಾರೋಪ

0

ಜೇಸಿಐ ಸುಳ್ಯ ಪಯಸ್ವಿನಿಯ ಜೇಸೀ ಸಪ್ತಾಹದ ಸಮಾರೋಪ ಕಾರ್ಯಕ್ರಮ ಸೆ.14 ರಂದು ಸುಳ್ಯ ದ ಅಮೃತಭವನದಲ್ಲಿ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಶ್ರೀಹರಿ ಪೈಂದೋಡಿಯವರಿಗೆ ಕಲಾ ಶ್ರೀ ಪ್ರಶಸ್ತಿ, ರಾಮಕೃಷ್ಣ ಗೌಡ ಕುದ್ಕುಳಿಯವರಿಗೆ ಪಯಸ್ವಿನಿ ಶ್ರೀ ಪ್ರಶಸ್ತಿ ಮತ್ತು Jc PPP ಅಶೋಕ್ ಚೂoತಾರು ಅವರಿಗೆ ಕಮಲ ಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತ ವಲಯ 15 ರ ವಲಯಾಧ್ಯಕ್ಷ Jc JFD ಪುರುಷೋತ್ತಮ ಶೆಟ್ಟಿ, ಹಾಗೂ SMA ಜೋನ್ ಛೇರ್ಮನ್ JFD ಸತೀಶ್ ಪೂಜಾರಿ ಭಾಗವಹಿಸಿದ್ದರು. ಘಟಕಾಧ್ಯಕ್ಷ Jc ನವೀನಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಳ್ಯ ಪಯಸ್ವಿನಿ ಯ ಪೂರ್ವಾಧ್ಯಕ್ಷ Jc HGF ಮೋಹನ್ AK ಯವರು ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡಿದರು.

ಸಭಾ ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ JFM ದೇವರಾಜ್ ಕುದ್ಪಾಜೆ, ವಲಯಾಧಿಕಾರಿ ಜೇಸಿ ಗುರುರಾಜ್ ಅಜ್ಜಾವರ, SMA ಜೋನ್ ವೈಸ್ ಛೇರ್ಮನ್ ಪ್ರಶಾಂತ್ ಕುಮಾರ್ ರೈ, EA to ZP Jc ಕಾರ್ತೀಕ್, ಪಯಸ್ವಿನಿ ಚಾರಿಟೇಬಲ್ ಅಧ್ಯಕ್ಷರಾದ ಜಯಪ್ರಕಾಶ್ ಕಾನತ್ತಿಲ, ಪಯಸ್ವಿನಿ ಸೀನಿಯರ್ ಲೀಸನ್ ನ ಅಧ್ಯಕ್ಷರಾದ ಗಂಗಾಧರ ಪಿ.ಎಸ್., ನಿಕಟಪೂರ್ವಾಧ್ಯಕ್ಷ Jc ರಂಜಿತ್ ಕುಕ್ಕೇಟಿ ಉಪಸ್ಥಿತರಿದ್ದರು. Jc ಗುರುಪ್ರಸಾದ್ ರವರು ಅತಿಥಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. Jc ಲತಾ ಸುಪ್ರೀತ್, Jc ತಾರಾ ಗೌಡ, Jc ಶೋಭಾ ಅಶೋಕ್, Jc ಚೈತನ್ಯ ದೇವರಾಜ್, Jc ಸುನಿತಾ ರವಿಕುಮಾರ್ ಸನ್ಮಾನ ಪತ್ರ ವಾಚಿಸಿದರು. Jc ಸುರೇಶ್ ಕಾಮತ್ ವಂದನಾರ್ಪಣೆಗೈದರು.