ಸಾವಿತ್ರಿಭಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಪ್ರಮೀಳಾ ರಾಜ್ ಆಯ್ಕೆ

0

ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ್ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ನೀಡಲಾಗುವ ಸಾವಿತ್ರಿ ಭಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ದೇವರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಕವಯತ್ರಿ ಶ್ರೀಮತಿ ಪ್ರಮೀಳಾ ರಾಜ್ ಅವರು ಆಯ್ಕೆಯಾಗಿದ್ದಾರೆ.


ಸೆ. 24ರಂದು ಬೆಳಗಾವಿಯಲ್ಲಿ ನಡೆಯಲಿರುವ ಗುರುವಂದನಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಉದಯೋನ್ಮುಖ ಕವಯತ್ರಿ ಪ್ರಮೀಳಾ ರಾಜ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ.

ಇವರ ಮೊದಲ ಕೃತಿ ಸಂಗೀತ ನನ್ನೆದೆಯ ಭಾವಗಳ ಯಾನ ಎಂಬ ಕವನ ಸಂಕಲನ ಕೃತಿಯು 2018ರಲ್ಲಿ ಪ್ರಕಟವಾಗಿದ್ದು, ಎರಡನೇ ಸಾಹಿತ್ಯ ಕೃತಿ 2023ಅಕ್ಟೋಬರ್ 29ರಂದು ಮಂಗಳೂರಿನ ಕಥಾ ಬಿಂದು ಪ್ರಕಾಶನದಿಂದ ಬಿಡುಗಡೆಯಾಗಲಿದೆ.
ಇವರು ಬಂಟ್ವಾಳ ತಾಲೂಕಿನ ದಿ. ಶೀನ ಮತ್ತು ಲಲಿತ ದಂಪತಿ ಪುತ್ರಿಯಾಗಿದ್ದು ಬೆಂಗಳೂರಿನ ರಾಜ್ ಅವರ ಪತ್ನಿಯಾಗಿರುತ್ತಾರೆ.