ಜೋಸೆಫ್ ಅರುಣ್ ಕ್ರಾಸ್ತಾ ಬೀರಮಂಗಲ ನಿಧನ

0

ಸುಳ್ಯ ಬೀರಮಂಗಲ ನಿವಾಸಿ ಜೋಸೆಫ್ ಅರುಣ್ ಕ್ರಾಸ್ತಾ ಅಸೌಖ್ಯದಿಂದ ಸೆ.21 ರಂದು ಸ್ವಗೃಹದಲ್ಲಿ‌ ನಿಧನರಾದರು.
ಅವರಿಗೆ 47 ವರ್ಷ ವಯಸ್ಸಾಗಿತ್ತು.

ಕಾಂಗ್ರೆಸ್ ಕಾರ್ಯಕರ್ತರಾಗಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗೂ ಚರ್ಚ್ ನ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ICYM ನ ಪುತ್ತೂರು ವಲಯದ ಪ್ರಥಮ ಅಧ್ಯಕ್ಷರು ಹಾಗೂ ಪ್ರಸ್ತುತ ಕಥೋಲಿಕ ಸಭಾ ಪುತ್ತೂರು ವಲಯದ ಉಪಾಧ್ಯಕ್ಷರು ಹಾಗೂ ಬಾಲಯೇಸು ಸಮುದಾಯದ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಪ್ರಿಯಾ ಕ್ರಾಸ್ತ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ.