ಹರಿಹರ ಪಲ್ಲತ್ತಡ್ಕ: ಸಚಿನ್ ಕ್ರೀಡಾ ಸಂಘದಿಂದ ಸ್ವಚ್ಚತಾ ಕಾರ್ಯಕ್ರಮ

0

ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ ಇವರ ವತಿಯಿಂದ ಗಾಂದಿ ಜಯಂತಿ ಪ್ರಯುಕ್ತ ಅ.2 ರಂದು ಹರಿಹರಪಲ್ಲತಡ್ಕ ಶಾಲಾ ಬಳಿ ಇರುವ ಬಸ್ ತಂಗುದಾಣ ಹಾಗು ರಸ್ತೆಯ ಇಕ್ಕೆಲಗಳಲ್ಲಿದ್ದ ಗಿಡಗಂಟಿಗಳನ್ನು ಹಾಗೂ ಚರಂಡಿಗಳಲ್ಲಿದ್ದ ಬಾಟ್ಲಿ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಚಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರದೀಪ್ ಕಜ್ಜೋಡಿ, ಪಂಚಾಯತ್ ಅದ್ಯಕ್ಷ ವಿಜಯ ಕುಮಾರ್ ಅಂಗಣ,ಉಮೇಶ್ ಕಜ್ಜೋಡಿ ನಿತ್ಯಾನಂದ ಎಲ್ಲಪಡ್ಕ ಹಾಗು ಸಂಘದ ಸದಸ್ಯರುಗಳು ಹಾಜರಿದ್ದರು.

ಕುಶಾಲಪ್ಪ ಕಾಂತುಕುಮೇರಿ