ಜಯನಗರ–ಕೊಡಿಯಾಲಬೈಲು ಸಂಪರ್ಕ ರಸ್ತೆಯಲ್ಲಿ ಹದಗೆಟ್ಟ ರಸ್ತೆಯನ್ನು ಸರಿಪಡಿಸಿದ ಸ್ಥಳೀಯ ನಿವಾಸಿಗಳು

0

ಸುಳ್ಯದ ಹಳೆಗೇಟು ಬಳಿಯ ಮಿಲಿಟರಿ ಗ್ರೌಂಡ್ ಬಳಿ ಜಯನಗರ–ಕೊಡಿಯಾಲಬೈಲು ಸಂಪರ್ಕ ರಸ್ತೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಮರದ ನೀರು ಬಿದ್ದು ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು ಅಲ್ಲಲ್ಲಿ ಹೊಂಡಗಳಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು.


ಹಿಂದೆ ಈ ಭಾಗದಲ್ಲಿ ಜೆಸಿಪಿಯಲ್ಲಿ ಡೋಸಿಂಗ್ ಮಾಡಿ ಸರಿಪಡಿಸಿದ್ದರೂ ಮಳೆಗಾಲದಲ್ಲಿ ಮತ್ತೆ ಅದೇ ತೊಂದರೆ ಪಾದಚಾರಿಗಳೂ, ವಾಹನ ಸಂಚಾರರೂ ಅನುಭವಿಸುತ್ತಿದ್ದು ಇದನ್ನು ಕಂಡ ಸ್ಥಳೀಯ ಜಯನಗರ ನಿವಾಸಿ ಕಂಟ್ರಾಕ್ಟರ್ ಹನೀಫ್ ಅವರು ಜಯನಗರದ ಟ್ರ್ಯಾಕ್ಟರ್ ಮಹಮ್ಮದ್ ಅವರನ್ನು ಸಹಾಯಕ್ಕೆ ಪಡೆದು ಆ ಹೊಂಡಗಳಿಗೆ ಟ್ರ್ಯಾಕ್ಟರ್ ಮೂಲಕ ಕಲ್ಲುಗಳನ್ನು ಹಾಕಿ ಸರಿಪಡಿಸಿ ವಾಹನ ಸಂಚಾರಕ್ಕೆ ಸಹಕರಿಸಿದರು.

ಇವರೊಂದಿಗೆ ಸುಳ್ಯ ನಗರ ಪಂಚಾಯತ್ ಮೂರನೇ ವಾರ್ಡಿನ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕೀರಿ, ಬಾಬು ನಾರಜೆ, ಗೋಪಾಲ ಹೊಸಗದ್ದೆ, ಲೋಕೇಶ್ ನಾರಾಜೆ, ಸುರೇಶ್ ನಾರಾಜೆ ಸಹಕರಿಸಿದ್ದಾರೆ.
ಮುಂದಿನ ದಿನಗಳಲ್ಲಾದರೂ ಈ ಭಾಗವನ್ನು ಸರಿಪಡಿಸುವ ಕಾರ್ಯಕ್ಕೆ ಸ್ಥಳೀಯ ನಗರ ಪಂಚಾಯತಿ ಸದಸ್ಯರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.