ಗ್ರಾಹಕರೊಬ್ಬರಿಂದ ಹಲ್ಲೆ : ಮೆಸ್ಕಾಂ ಎ.ಇ. ಪೋಲೀಸ್ ದೂರು

0


ಬಿಲ್ ಕಟ್ಟದ ಕಾರಣ ವಿದ್ಯುತ್ ಸಂಪರ್ಕ ತುಂಡರಿಸಿದ್ದಕ್ಕೆ ಗ್ರಾಹಕರೊಬ್ಬರು ಅವಚ್ಯವಾಗಿ ಬೈದು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಸುಳ್ಯ ಮೆಸ್ಕಾಂ ಎ.ಇ. ಸುಪ್ರೀತ್ ರವರು ಪೋಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ.


ಗಾಂಧಿನಗರದ ಭಾಸ್ಕರ ಎಂಬವರ ಮೇಲೆ ಮೆಸ್ಕಾಂ ಎ.ಇ. ಈ ದೂರು ನೀಡಿದ್ದಾರೆ. ” ತನ್ನ ವಿದ್ಯುತ್ ಸಂಪರ್ಕ ತುಂಡರಿಸಿದ್ದನ್ನು ಮರುಜೋಡಿಸಲು ಹಣಪಾವತಿಸಿ ರಶೀದಿ ಕೊಡಲು ಹೋದಾಗ ಎ.ಇ. ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಭಾಸ್ಕರ್ ಸುದ್ದಿಗೆ ತಿಳಿಸಿದ್ದಾರೆ.