ಸುಬ್ರಹ್ಮಣ್ಯ : ಇನ್ನರ್ ವೀಲ್ ಕ್ಲಬ್ಬಿಗೆ ಜಿಲ್ಲಾ ಚೇರ್ಮನ್ ಭೇಟಿ

0


ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ಬಿಗೆ ಡಿಸ್ಟ್ರಿಕ್ಟ್ 318 ನಚೇರ್ಮನ್ ಪೂರ್ಣಿಮಾ ರವಿ ಅವರು ಅ.15 ರಂದು ಭೇಟಿ ನೀಡಿದರು. ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅವರನ್ನು ಆದಿಶೇಷ ಅತಿಥಿ ಗ್ರಹದಲ್ಲಿ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವೇದ ಶಿವರಾಮ್, ಕಾರ್ಯದರ್ಶಿ ಶೃತಿ ಮಂಜುನಾಥ್, ಖಜಾಂಜಿ ಶೋಭಾ ಗಿರಿಧರ್, ಪೂರ್ವ ಅಧ್ಯಕ್ಷರಾದ ಲೀಲಾ ವಿಶ್ವನಾಥ್ ,ಹಾಗೂ ಸರೋಜಾ ಮಾಯಿಲಪ್ಪ ಬರಮಾಡಿಕೊಂಡರು. ನಂತರ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ಬಿನ ಅದ್ಯಕ್ಷೇ ವೇದ ಶಿವರಾಂ ವಹಿಸಿದ್ದರು .

ಡಿಸ್ಟ್ರಿಕ್ಟ್ ಚೇರ್ಮೆನ್ ಪೂರ್ಣಿಮಾ ರವಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು .ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶೃತಿ ಮಂಜುನಾಥ್ ವಾಚಿಸಿದರು. ಈ ಸಂದರ್ಭದಲ್ಲಿ ಏನೆಕಲ್ಲಿನ ಬಾನಡ್ಕ, ಶಾರದಾ ಗುಡ್ಡೆ ಹಾಗೂ ಏನೆಕಲ್ ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗೋಸ್ಕರ ಸ್ಟೀಲ್ ಬಾಟಲುಗಳನ್ನು ಅಂಗನವಾಡಿ ಶಿಕ್ಷಕಿಯರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಡಿಕೇರಿ ಇನ್ನರ್ ವೀಲ್ ಕ್ಲಬ್ಬಿನ ಬೊಳ್ಳು ಮೇದಪ್ಪ, ಸುಬ್ರಹ್ಮಣ್ಯ ಇನ್ನರ್ವೇಲ್ ಕ್ಲಬ್ಬಿನ ಸಚಿತಗೋಪಾಲ್, ಶ್ರೀಜಾ ಚಂದ್ರಶೇಖರ್, ಸೌಮ್ಯ ದಿನೇಶ್, ಅನನ್ಯ ಪವನ್, ಹಾಗೂ ರೋಟರಿ ಕ್ಲಬ್ಬಿನ ಅಧ್ಯಕ್ಷರು ಹಾಗೂ ಸದಸ್ಯರು, ಏನೆಕಲ್ ಬಾಲವಿಕಾಸ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ,ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು .ಪೂರ್ವ ಅಧ್ಯಕ್ಷೆ ಸರೋಜಾ ಮಾಯಿಲಪ್ಪ ಅವರು ಡಿಸ್ಟ್ರಿಕ್ಟ್ ಚೇರ್ಮನ್ ಅವರ ಪರಿಚಯ ಮಾಡಿದರು. ಸದಸ್ಯ ಸೋನು ಭಟ್ ಅವರು ಪ್ರಾರ್ಥನೆ ನೆರವೇರಿಸಿದರು. ಪೂರ್ವ ಅಧ್ಯಕ್ಷೆ ಭಾರತಿ ದಿನೇಶ್ ಸ್ವಾಗತಿಸಿದರು .ಪೂರ್ವ ಅದ್ಯಕ್ಷೆ ಲೀಲಾ ವಿಶ್ವನಾಥ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಖಜಾಂಜಿ ಶೋಭಾ ಗಿರಿಧರ್ ಧನ್ಯವಾದ ಇತ್ತರು.