ಓಡಬಾಯಿಯಲ್ಲಾದ ಅಪಘಾತ : ಗಾಯಾಳು ಗುರುತು ಪತ್ತೆ

0

ಚೊಕ್ಕಾಡಿಯ ಮುಖೇಶ್ ತೀವ್ರ ಜಖಂ

ಇದೀಗ ಸಂಜೆ 7.45 ರ ಸುಮಾರಿಗೆ ಸುಳ್ಯದ ಓಡಬಾಯಿಯಲ್ಲಿ ನಡೆದ ಕಾರು – ಟ್ರಾವೆಲರ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಕಾರು ಚಲಾಯಿಸುತ್ತಿದ್ದ ಚೊಕ್ಕಾಡಿಯ ಎ.ಕೆ.ನಾಯ್ಕ್ ರ ಪುತ್ರ ಮುಖೇಶ್ ಎಂದು ಗೊತ್ತಾಗಿದೆ.


ಮುಖೇಶ್ ತನ್ನ ಕಾರಲ್ಲಿ ಸುಳ್ಯ ಕಡೆಯಿಂದ ಚೊಕ್ಕಾಡಿ ಕಡೆಗೆ ಹೋಗುತ್ತಿದ್ದರು. ಟೆಂಪೊ ಟ್ರಾವೆಲ್ಲರ್ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿತ್ತು. ಅಪಘಾತದ ಪರಿಣಾಮವಾಗಿ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಮುಖೇಶ್ ರವರ ಮುಖಕ್ಕೆ ಏಟಾಗಿದೆ. ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದ್ದು, ಅವರಿಗೆ ಸ್ಮೃತಿ ಬಂದಿದೆ ಎಂದು ತಿಳಿದುಬಂದಿದೆ.