ಪಂಜ ದೇವಳದಲ್ಲಿ ನವರಾತ್ರಿ ಉತ್ಸವ

0


ಭರತನಾಟ್ಯ ಕಲಾ ಸೇವೆ-ಭಜನಾ ಸಂಕೀರ್ತನೆ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅ.15 ರಂದು ಆರಂಭ ಗೊಂಡಿದ್ದು ಅ.23 ತನಕ ಜರುಗಲಿದೆ.


ಅ.19ರಂದು ರಾತ್ರಿ ಭಜನಾ ಸಂಕೀರ್ತನೆ, ಮಹಾಪೂಜೆ, ಪ್ರಸಾದ, ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ಸರಯು ವಿ ಮುಚ್ಚಿಲ ರವರಿಂದ ಭರತನಾಟ್ಯ ,ಸುಂದರ ದೇವಾಡಿಗ: ಶಂಬನಾದ ಕಲಾಸೇವೆ ನಡೆಯಿತು.ವ್ಯವಸ್ಥಾಪನಾ ಸಮಿತಿಯವರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು
ಅ.20.ರಂದು ರಾಮಚಂದ್ರ ಕಲ್ಮಡ್ಕ ಮತ್ತು ತಂಡದವರಿಂದ ವೇಣುವಾದನ .ಅ.21 ರಂದು ವಸುಧಾ ಬಿ ಮುಚ್ಚಿಲ ,ಸ್ತುತಿ ರೈ ಅಡ್ಠಬೈಲು ರವರಿಂದ ಭರತನಾಟ್ಯ.ಅ.22 ರಂದು ಸುಮಾ ಕೋಟೆ ರವರಿಂದ ಭಕ್ತಿ ಸಂಗೀತ.ಅ.23 ರಂದು ಕೃಷ್ಣ ಭಟ್ ಸಂಪ ರವರಿಂದ ಪುರಾಣ ವಾಚನ ಕಲಾ ಸೇವೆ ನಡೆಯಲಿದೆ.
ಪ್ರತಿ ದಿನ ಸಂಜೆ ಗಂಟೆ 7 ರಿಂದ ವಿಶೇಷ ಪೂಜಾದಿಗಳು , ವಿಶೇಷ ಕಲಾಪ್ರಕಾರಗಳ ಸೇವೆಗಳು ಜರುಗಲಿದೆ. ಶ್ರೀ ಅಮ್ಮನವರಿಗೆ ಸೀರೆ ,ಕುಪ್ಪಸ ,ಅರಶಿನ ಶುದ್ಧ ಕುಂಕುಮವನ್ನು ಸಮರ್ಪಿಸಲು ಅವಕಾಶವಿರುತ್ತದೆ.ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.