ಸುಳ್ಯದ ರಂಗಮಯೂರಿ ಕಲಾ ಶಾಲೆಯಲ್ಲಿ ಭಕ್ತಿ ಸಂಭ್ರಮದ ಶಾರದಾ ಪೂಜೆ

0

ಶಾರದಾ ಮಾತೆಗೆ
ಮಕ್ಕಳ ಆರತಿಯೊಂದಿಗೆ ಭಜನಾ ಸಂಕೀರ್ತನೆ

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಲೋಕೇಶ್ ಊರುಬೈಲು ರವರ ಸಂಚಾಲಕತ್ವದ ರಂಗಮಯೂರಿ ಕಲಾ ಶಾಲೆಯಲ್ಲಿ ನವರಾತ್ರಿ ಹಬ್ಬದ ಸಲುವಾಗಿ ಶ್ರೀ ಶಾರದಾ ದೇವಿಯ ಪೂಜೆ ಹಾಗೂ ಭಜನಾ ಸಂಕೀರ್ತನೆಯು ಅ.20 ರಂದು ನಡೆಯಿತು.

ಬೆಳಗ್ಗೆ ಅರ್ಚಕ ಅಭಿರಾಮ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು.


ಬಳಿಕ ಶಾರದಾ ಪೂಜೆಗೆ ಶಾಸ್ತ್ರೀಯ ಸಂಗೀತ ಗುರು ಮಹಾಬಲೇಶ್ವರ ಬಿರ್ಮಕಜೆ ಯವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸುದ್ದಿ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಹಾಗೂ ಸುಗಮ ಸಂಗೀತ ಶಿಕ್ಷಕಿ ಶ್ರೀಮತಿ ಸುಮನ ರಾವ್ ಶುಭ ಹಾರೈಸಿದರು. ಲೋಕೇಶ್ ಊರುಬೈಲು ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.
ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಯ ಆರತಿಯೊಂದಿಗೆ ಭಜನಾ ಸಂಕೀರ್ತನೆಯ ಆರಾಧನೆಯು ವಿಶೇಷವಾಗಿತ್ತು.
ಮಧ್ಯಾಹ್ನ ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ಕಲಾ ಶಾಲೆಯ ಪೋಷಕ ಕಮಿಟಿಯವರು ಹಾಗೂ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಭಾಗವಹಿಸಿದರು.