ಗಾಂಧಿನಗರ : ಅಡುಗೆಗೆ ಬಳಸುವ ಎಣ್ಣೆ ಕುಡಿದು ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಯತ್ನ

0

ಅಸ್ಪತ್ರೆಗೆ ಸಾಗಿಸಿದ ಸ್ಥಳೀಯರು, ಪ್ರಾಣಪಾಯದಿಂದ ಪಾರು

ಸುಳ್ಯ ಗಾಂಧಿನಗರದಲ್ಲಿ ವಾಸವಿರುವ ಉತ್ತರ ಕರ್ನಾಟಕ ಭಾಗದ ಕೂಲಿ ಕಾರ್ಮಿಕನೋರ್ವ ನಿನ್ನೆ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಅಡುಗೆ ಪದಾರ್ಥಕ್ಕೆ ಬಳಸುವ ಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.

ಉತ್ತರ ಕರ್ನಾಟಕದ ಗದಗ ಮೂಲದ ಮುತ್ತುರಾಜ್ ಎಂಬಾತ ತನ್ನ ಪರಿಚಿತರ ಜೊತೆಗೆ ಗಲಾಟೆ ಮಾಡಿಕೊಂಡು, ಮಾತಿಗೆ ಮಾತು ಬೆಳೆದು ಕೋಪಗೊಂಡು ಮನೆಯಲ್ಲಿ ಇಟ್ಟಿದ್ದ ಪಾಮ್ ಆಯಿಲ್ ಕುಡಿದಿದ್ದ.

ಕೂಡಲೇ ಸ್ಥಳೀಯರು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮದ್ಯಪಾನದಿಂದ ಗಲಾಟೆ ನಡೆದಿದೆ ಎಂದು ಊಹಿ ಸಲಾಗಿದೆ.

ಇದೀಗ ಆತ ಸುಳ್ಯ ಸರ್ಕರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.