ಕೆವಿಜಿ ಐಪಿಎಸ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0


ಕೆವಿಜಿ ಐಪಿಎಸ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿಯವರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು .ಜೆ ಶುಭ ಹಾರೈಸಿದರು.


ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳು ಅಭಿನಯ ಗೀತೆ ಹಾಡಿದರು. 3 ರಿಂದ 7 ನೇ ತರಗತಿವರೆಗಿನ ಮಕ್ಕಳು ಕನ್ನಡದ ಗೀತೆಗಳನ್ನು ಹಾಡಿ ,ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕನ್ನಡದ ಕಂಪನ್ನು ಬೀರಿ ಇಂಪಾಗಿ ಹಾಡಿದರು.

8ನೇ ತರಗತಿಯ ವಿದ್ಯಾರ್ಥಿಗಳು ಕನ್ನಡದ ಪ್ರಸಿದ್ಧ ಗೀತೆಗಳ ಹಾಡಿಗೆ ನೃತ್ಯ ಪ್ರದರ್ಶನವನ್ನು ನೀಡಿದರು. 7ನೇ ತರಗತಿ ವಿದ್ಯಾರ್ಥಿಗಳಾದ ಅನಿಂದ್ಯ ಶ್ಯಾಮ್ ಹಾಗೂ ಸಾತ್ವಿಕ್ ಕನ್ನಡ ರಾಜ್ಯೋತ್ಸವದ ಕುರಿತಾಗಿ ಭಾಷಣ ಮಾಡಿದರು. ನಿಧಿ ಸ್ವಾಗತಿಸಿ, ಪ್ರಫುಲ್ಲ ವಂದಿಸಿದಳು. 6ನೇ ತರಗತಿಯ ತನ್ವಿ ಮತ್ತು ಶ್ರುತ ರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ , ಉಪ ಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ ಮತ್ತು ಎಲ್ಲ ಶಿಕ್ಷಕ ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು.