ಪಾಂಡಿಚೇರಿಯಲ್ಲಿ ಮೃತಪಟ್ಟ ಬಿಪಿನ್ ಚಿದ್ಗಲ್ ಪಾರ್ಥೀವ ಶರೀರ ನಾಳೆ ಮುಂಜಾನೆ ಪಂಜಕ್ಕೆ ಆಗಮನ

0

ಪಾಂಡಿಚೇರಿಯಲ್ಲಿ ಸಮುದ್ರಪಾಲಾಗಿ ಮೃತಪಟ್ಟ ಪಂಜ ಚಿದ್ಗಲ್‌ನ ಬಿಪಿನ್ ಅವರ ಪಾರ್ಥವ ಶರೀರ ಮಂಗಳವಾರ ಮುಂಜಾನೆ ಚಿದ್ಗಲ್ ಮನೆಗೆ ಆಗಮಿಸಲಿದೆ ಎಂದು ತಿಳಿದು ಬಂದಿದೆ.

ಮರಣ ವಾರ್ತೆ ತಿಳಿದು ಬೆಂಗಳೂರಿನಲ್ಲಿರುವ ಬಿಪಿನ್ ಅವರ ಬಂಧುಗಳು ನಿನ್ನೆಯೇ ಪಾಂಡಿಚೇರಿಯತ್ತ ತೆರಳಿದ್ದರು.

ಇಂದು ಮಧ್ಯಾಹ್ನದ ವೇಳೆ ಪಾಂಡಿಚೇರಿಯಲ್ಲಿ ಮೃತ ದೇಹದ ಮಹಜರು ಮತ್ತು ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮನೆಯವರಿಗೆ ಬಿಟ್ಟು ಕೊಡಲಾಗಿದ್ದು, ಆಂಬ್ಯುಲೆನ್ಸ್‌ನಲ್ಲಿ ಪಾರ್ಥಿವ ಶರೀರ ಪಂಜದತ್ತ ಹೊರಟಿದೆ.

ಮಂಗಳವಾರ ಮುಂಜಾನೆ 4 ಗಂಟೆಯ ವೇಳೆಗೆ ಚಿದ್ಗಲ್ ಗೆ ತಲುಪುವ ಸಾಧ್ಯತೆ ಇದೆ. ನಾಳೆ ಬೆಳಿಗ್ಗೆ 9 ಗಂಟೆಯ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.