ಕೊಡಿಯಾಲ: ತಂದೆ,ತಾಯಿಯ ಮೇಲೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಮಗನ ಬಂಧನ

0

ಆರೋಪಿ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

ಮದ್ಯದ ನಶೆಯಲ್ಲಿ ಮಗನೊಬ್ಬ ಹೆತ್ತ ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ ಘಟನೆ ನ.20ರಂದು ಕೊಡಿಯಾಲದ ಕಲ್ಪಣೆ ಎಂಬಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಗನನ್ನು ಪೊಲೀಸರು ಬಂದಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ತಂದೆ-ತಾಯಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು
ಅವರು ನೀಡಿದ ದೂರಿನಂತೆ ದೇವಿಪ್ರಸಾದ್ ಆಚಾರ್ಯ ಕಲ್ಲಗದ್ದೆ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಇಂದು ಸಂಜೆ ಕೇಸು ದಾಖಲಾಗಿದೆ. ಜಾಗದ ವಿಚಾರಕ್ಕೆ ತಕರಾರು ನಡೆದು ತಂದೆ ಮಂಜುನಾಥ ಆಚಾರಿ ಮತ್ತು ತಾಯಿ ಧರ್ಮಾವತಿ ಯವರ ಮೇಲೆ ಉದ್ವಾತದ್ವಾ ಕತ್ತಿ ಬೀಸಿ ಗಾಯಗೊಳಿಸಿದ್ದರು.
ಅಂಗೈ ,ಎದೆ ಮತ್ತು ತಲೆ ಭಾಗಕ್ಕೆ ಗಾಯಗೊಂಡಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.