ಐವರ್ನಾಡಿನಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿ ತೆಂಕು ತಿಟ್ಟು ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆಗೊಂಡಿತು. ವೆಂಕಟೇಶ್ ಕುಮಾರ್ ( ಸಂಸ್ಕೃತ ಅಧ್ಯಾಪಕರು ವಿದ್ಯಾಬೋದಿನಿ ಪ್ರೌಡ ಶಾಲೆ ಬಾಳಿಲ) ಇವರು ಉದ್ಘಾಟನೆ ನೆರವೇರಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಯಕ್ಷಗಾನ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಅರಳಿಕಟ್ಟೆ, ಲಿಂಗಪ್ಪ ಬೆಳ್ಳಾರೆ ( ಪ್ರಭಾರ ಮುಖ್ಯ ಶಿಕ್ಷಕರು ಸರಕಾರಿ ಪ್ರೌಡ ಶಾಲೆ ಎಣ್ಮೂರು), ಯಕ್ಷಗಾನ ಗುರುಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ, ನಾಗಪ್ಪ ಗೌಡ ಪಾಲೆಪ್ಪಾಡಿ ಪೋಷಕರ ಸಮಿತಿ, ಶ್ರೀಮತಿ ರಾಜೇಶ್ವರಿ ಅಂಗನವಾಡಿ ಕಾರ್ಯಕರ್ತೆ ದೊಡ್ಡತೋಟ ಇವರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಸಾನ್ವಿ,ನಿಶಾ, ಅಕ್ಷತಾ ನೆರವೇರಿಸಿದರು. ಉಪಾಧ್ಯಕ್ಷರಾದ ರಾಜೀವಿ ಉದ್ದಂಪಾಡಿ ಸ್ವಾಗತಿಸಿದರು. ಶ್ರೀಮತಿ ಅಮಿತ ಲಾವಂತಡ್ಕ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಉಪಹಾರ ವ್ಯವಸ್ಥೆಯನ್ನು ಎಸ್. ಡಿ. ಎಂ. ಸಿ ಸದಸ್ಯರಾದ ಖಲಂದರ್ ಶರೀಫ್ ರವರು ನೀಡಿದ್ದರು. ಶ್ರೀಮತಿ ರಾಜೇಶ್ವರಿ ವಂದಿಸಿದರು.