ಏನೆಕಲ್ಲು ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಮತ್ತು ದತ್ತಿನಿಧಿ ಪುರಸ್ಕಾರ ಕಾರ್ಯಕ್ರಮ

0

ಏನೆಕಲ್ಲು ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವದ ಮತ್ತು ದತ್ತಿ ನಿಧಿ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕ್ರೀಡಾಕೂಟದ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಕುಮಾರ್ ಅಂಬೆಕಲ್ಲು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಧ್ವಜಾರೋಹಣವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ ಪಿ. ಇವರು ನೆರವೇರಿಸಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಅಮೈ (ದೈ.ಶಿ. ಶಿಕ್ಷಕರು), ಕಾರ್ಯದರ್ಶಿಗಳಾದ ಶಿವಪ್ರಸಾದ್ ಮಾದನ ಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಕೋಟಿಗೌಡನ ಮನೆ, ಸೊಸೈಟಿ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ ಪರಮಲೆ, ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಿಕಾ.ಬಿ. ಸಿ , ರೈತ ಯುವಕ ಮಂಡಲದ ಅಧ್ಯಕ್ಷರಾದ ಮನುದೇವ್ ಪರಮಲೆ, ಯೇನೆಕಲ್ಲು ಯುವಕ ಮಂಡಲದ ಕಟ್ಟಡ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಯೇನೆಕಲ್ಲು ಪ್ರೌಢಶಾಲೆಯ ಮುಖ್ಯ ಗುರು ರಮೇಶ್ , ನಿವೃತ್ತ ದೈ.ಶಿ .ಶಿಕ್ಷಕರಾದ ಶಿವರಾಮ ಯೇನೆಕಲ್ಲು , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಸತತ ಎರಡನೇ ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿ ಗಗನ್ .ಎ.ರನ್ನು ಅಭಿನಂದಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ಅಂಬಿಕಾ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ರತ್ನಾವತಿ ದತ್ತಿ ನಿಧಿ ಪಟ್ಟಿಯನ್ನು ವಾಚಿಸಿದರು . ಶ್ರೀಮತಿ ಸುಮಿತ್ರ ಸಾಂಸ್ಕೃತಿಕ ಪಟ್ಟಿ , ಕು.ಸ್ಮಿತಾ ಕ್ರೀಡಾಕೂಟದ ಫಲಿತಾಂಶ ಪಟ್ಟಿಯನ್ನು ವಾಚಿಸಿದರು. ದೈ.ಶಿ.ಶಿಕ್ಷಕಿ ಶ್ರೀಮತಿ ಕಮಲ ವಂದಿಸಿದರು. ಕು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಎರಡು ಅಂಗನವಾಡಿಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಹಿರಿಯ ವಿದ್ಯಾರ್ಥಿಗಳಿಗೆ ಪೋಷಕರಿಗೆ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕ್ರೀಡಾಕೂಟ ದ ಯಶಸ್ವಿಗೆ ಎಸ್‌ಡಿಎಂಸಿ ಅಧ್ಯಕ್ಷರು /ಸರ್ವ ಸದಸ್ಯರು, ಪೋಷಕರು , ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನಿರ್ಣಯಕರಾಗಿ ನಿವೃತ್ತ ದೈ.ಶಿ. ನಿರ್ದೇಶಕರು ತುಕಾರಾಮ ಯೇನೆಕಲ್ಲು , ನಿವೃತ್ತ ದೈ.ಶಿ.ಶಿಕ್ಷಕ ನಾಗರಾಜ ಪಿ. ನಿವೃತ್ತ ದೈ.ಶಿ. ಶಿಕ್ಷಕರು , ನಿವೃತ್ತ ದೈ.ಶಿ.ಶಿಕ್ಷಕ ಶಿವರಾಮ ಯೇನೆಕಲ್ಲು , ದೈ.ಶಿ.ಶಿಕ್ಷಕ ಮೋಹಿತ್ ಜೇನುಕೋಡಿ, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.