ಸುಬ್ರಹ್ಮಣ್ಯ :ಜಾತ್ರೋತ್ಸವ ಸ್ವಚ್ಛತಾ ಕಾರ್ಯದಲ್ಲಿ ಡಾlರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್

0
  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರೋತ್ಸವ ಡಿ.10 ರಂದು ಆರಂಭಗೊಂಡಿದ್ದು ಜಾತ್ರೋತ್ಸವಕ್ಕೆ ದೂರ ದೂರಗಳಿಂದ ಬರುವ ಭಕ್ತಾದಿಗಳಿಗೆ ಸ್ವಚ್ಛ ಪರಿಸರದಲ್ಲಿ ದೇವರ ದರ್ಶನ ಆಗಬೇಕು ಎನ್ನುವ ಉದ್ದೇಶದಿಂದ  ಸ್ವಚ್ಚತಾ ಕಾರ್ಯ ಮಾಡಲಾಯಿತು.

ಪ್ರತಿ ವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ಡಾl ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ಕುಮಾರಧಾರ ಪರಿಸರ ಸೇತುವೆಯ ಪರಿಸರಗಳು ಮುಖ್ಯರಸ್ತೆಯ ಪರಿಸರಗಳಲ್ಲಿ ಇರತಕ್ಕಂತಹ ಬಾಟಲುಗಳು ಕಚ್ಚಾ ವಸ್ತುಗಳನ್ನು ತೆಗೆದು ಶುದ್ಧಗೊಳಿಸಿ ಸ್ವಚ್ಛ ಪರಿಸರವನ್ನ ಉಂಟು ಮಾಡಿದರು.

ರವಿ ಕಕ್ಕೆ ಪದವು ನೇತೃತ್ವದಲ್ಲಿ ಚನ್ನ ಅವರ ಸಾರಥ್ಯದಲ್ಲಿ, ಸುಮಾರು 60 ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿದರು.