ಪಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುರಕ್ಷಾ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪಂಜ ವಲಯದ ಐವತ್ತೊಕ್ಲು ಒಕ್ಕೂಟದ ಪರಿವಾರ ಸಂಘದ ಸದಸ್ಯೆ ಶ್ರೀಮತಿ ಜಾನಕಿ ಯವರ ಪತಿ ಕುಶಾಲಪ್ಪ ಗೌಡ ರೀಯಲ್ ಟೈಲರ್ ಪಂಜರವರ ಅನಾರೋಗ್ಯದ ಶಸ್ತ್ರ ಚಿಕಿತ್ಸೆಗೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾದಡಿಯಲ್ಲಿ ರೂ.30000/-ಮೊತ್ತದ ಚೆಕ್ ನ್ನು ತಾಲ್ಲೂಕು ಜನಜಾಗೃತಿ ಸದಸ್ಯ ಕುಶಾಲಪ್ಪ ಗೌಡ ದೊಡ್ಡಮನೆ ಯವರು ಸದಸ್ಯರ ಮನೆಯಲ್ಲಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೆಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಶೌರ್ಯ ವಿಪತ್ತು ಸಂಯೋಜಕರಾದ ವಿಶ್ವನಾಥ ಸಂಪ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಧನ್ಯ ,ಉಪಾಧ್ಯಕ್ಷೆ ಶ್ರೀಮತಿ ರೇವತಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಶ್ರೀಮತಿ ಕಲಾವತಿ ಸಂಪೂರ್ಣ ಸುರಕ್ಷಾದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಐವತ್ತೊಕ್ಲು ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ರೋಹಿಣಿ ಆರ್ನೋಜಿ ಸ್ವಾಗತಿಸಿದರು ಮತ್ತು ವಂದಿಸಿದರು.