ಅರಂತೋಡು : ನಿವೃತ್ತ ರೇಂಜರ್ ರ ಮನೆಗೆ ಬೆಂಕಿ – ಹೊತ್ತಿ ಉರಿದ ಮನೆ

0

ಆರಂತೋಡಿನ ಎಲ್ಪಕಜೆ ಎಂಬಲ್ಲಿ ನಿವೃತ್ತ ರೇಂಜರ್ ಹಿರಣ್ಯರಾಜ್ ಎಂಬವರ ಮನೆಗೆ ಹಾಗೂ ಕೊಟ್ಟಿಗೆಗೆ ಬೆಂಕಿ ಬಿದ್ದ ಘಟನೆ ಡಿ. 17 ರಂದು ಸಂಜೆ ಸಂಭವಿಸಿದೆ.

ಮನೆಯಲ್ಲಿ ಹಿರಣ್ಯರಾಜ್ ರವರ ಮಗ ಗಣೇಶ್ ಒಬ್ಬರೇ ವಾಸವಿದ್ದು, ತಂದೆ ಮತ್ತು ತಾಯಿ ಸುಳ್ಯದಲ್ಲಿ ವಾಸವಿದ್ದರೆನ್ನಲಾಗಿದೆ.

ಸಂಜೆ ಸುಮಾರು 6 ಗಂಟೆಗೆ ಈ ಘಟನೆ ಸಂಭವಿಸಿದ್ದು, ಹಂಚಿನ ಮನೆ ಹಾಗೂ ಸಮೀಪದಲ್ಲಿದ್ದ ಕೊಟ್ಟಿಗೆ ಭಾಗಶ ನಾಶಗೊಂಡಿದೆ.

ಗಣೇಶ್ ರವರು ಮಾನಸಿಕ ಅಸ್ವಸ್ಥತೆ ಯಿಂದ ಬಳಲುತಿದ್ದು, ಅವರೇ ಮನೆಗೆ ಬೆಂಕಿ ಕೊಟ್ಟಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳೀಯರು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.