ಪೂರ್ಣಿಮಾ ಪೆರ್ಲಂಪಾಡಿಯವರಿಗೆ ಸಾಹಿತ್ಯ ಕಣ್ಮಣಿ ಪ್ರಶಸ್ತಿ

0

ಪ್ರತಿಷ್ಠಿತ ಘಾನ ಸಂಸ್ಥೆಗಳಲ್ಲಿ ಒಂದಾದ ಆರ್‌ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಪುತ್ತೂರು ಇದರ ವತಿಯಿಂದ ಗಾನ ಶಾರದೆ ಗಾಯನ ಸ್ಪರ್ಧೆಯ ಸೀಸನ್ 2 ಗ್ರಾಂಡ್ ಫಿನಾಲೆ ಹಾಗೂ ವಿಶೇಷ ಸಾಧಕರಿಗೆ ಪ್ರಶಸ್ತಿ ಪ್ರದಾನ ಸನ್ಮಾನ 2023 ಕಾರ್ಯಕ್ರಮವು ಡಿಸೆಂಬರ್ 10 ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ ಪೆರ್ಲಂಪಾಡಿ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲಂಪಾಡಿಯವರಿಗೆ ಸಾಹಿತ್ಯ ಕಣ್ಮಣಿ ಬಿರುದು ನೀಡಿ ಸನ್ಮಾನಿಸಲಾಯಿತು