ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ, ಗಣಪತಿ ಹವನ, ಸತ್ಯನಾರಾಯಣ ಪೂಜೆ

0

ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ, ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಡಿ. 17ರಂದು ಸಂಘದ ಕಟ್ಟಡದಲ್ಲಿ ನಡೆಯಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿಚಂದ್ರ ಕಾಚಿಲ ವಹಿಸಿದ್ದರು.

ಮುಖ್ಯ ಅತಿಥಿಗಳಾ ಕರ್ನಾಟಕ ಮರಾಟಿ ಫೆಡರೇಶನ್ ಅಧ್ಯಕ್ಷ ಹಾಗೂ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ ಸುಂದರ ನಾಯ್ಕ ಐಎಫ್ಎಸ್, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಕಲ್ಮಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಕಲ್ಮಡ್ಕ ನವೋದಯ ಸಂಘದ ಅಧ್ಯಕ್ಷ ಶಿವರಾಮ ಬಿ, ಬೆಂಗಳೂರು ಕರ್ನಾಟಕ ಮಾರಾಟಿ ಸಂಘದ ಮಾಜಿ ಅಧ್ಯಕ್ಷ ವೆಂಕಪ್ಪ ನಾಯ್ಕ, ಮಹಾಲಕ್ಷ್ಮಿ ಮಹಿಳಾ ಮರಾಟಿ ಸಂಘ ಕಲ್ಮಡ್ಕ ಇದರ ಅಧ್ಯಕ್ಷೆ ಶ್ರೀಮತಿ ಹೇಮಲತಾ ರಾಮತ್ತಿಕಾರು ಭಾಗವಹಿಸಿದ್ದರು.

ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ ಪೂರ್ವಾಧ್ಯಕ್ಷ ರುಕ್ಮಯ ನಾಯ್ಕ ಧರ್ಮಡ್ಕ, ನಾಟಿವೈದ್ಯೆ ಶ್ರೀಮತಿ ಕಮಲ ಶೇಡಿಕರೆ, ಸಂಘದ ಸ್ಥಾಪಕ ಸದಸ್ಯರೂ, ಗೌರವಾಧ್ಯಕ್ಷರೂ ಅಗಿದ್ದ ದಿ. ಶಿವಪ್ಪ ನಾಯ್ಕ ಸ್ಮರಣಾರ್ಥ ಅವರ ಪತ್ನಿ ಶ್ರೀಮತಿ ಕುಸುಮ ಶಿವಪ್ಪ ನಾಯ್ಕ ಮಾಳಪ್ಪಮಕ್ಕಿ ಇವರುಗಳಿಗೆ ಗೌರವ ಸನ್ಮಾನ ನೀಡಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದಿರುವ ಪ್ರತಿಭಾನ್ವಿತರನ್ನು ಗುರುತಿಸಲಾಯಿತು.

ಸಂಘದ ವಾರ್ಷಿಕ ವರದಿಯನ್ನು ಗುರುಪ್ರಸಾದ್ ಕಾಚಿಲ ವಾಚಿಸಿದರು. ವೆಂಕಟ್ರಮಣ ಧರ್ಮಡ್ಕ ಪ್ರಾರ್ಥಿಸಿದರು. ಶ್ರೀಮತಿ ಸ್ವಾತಿ ಸ್ವಾಗತಿಸಿ, ಜಯರಾಜ್ ಕಡಂಬುಕಾನ ವಂದಿಸಿದರು. ಕು. ಪಲ್ಲವಿ ಕಾಚಿಲ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಸತ್ಯನಾರಾಯಣ ದೇವರ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.