ದೊಡ್ಡತೋಟ – ಮರ್ಕಂಜ ರಸ್ತೆಯ ಮಧ್ಯೆ ಚಿರತೆ ಪ್ರತ್ಯಕ್ಷ ಹಿನ್ನೆಲೆ

0

ದೊಡ್ಡತೋಟ – ಮರ್ಕಂಜ ರಸ್ತೆಯ ಮಧ್ಯೆ ಕೊರತ್ತೋಡಿ ಎಂಬಲ್ಲಿ‌ ನಿನ್ನೆ ರಾತ್ರಿ ರಿಕ್ಷಾ ಚಾಲಕರೋರ್ವರಿಗೆ ಚಿರತೆ ಕಾಣಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಚಿರತೆ ಓಡಾಡಿದ ಕೆಲವು ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಿ ಚಿರತೆಯ ಚಲನಾವಲನ ಗಮನಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಪಾಜೆ ಉಪವಲಯಾರಣ್ಯಾಧಿಕಾರಿ ಚಂದ್ರು ಹಾಗೂ ರವೀಂದ್ರ, ಗಸ್ತು ಅರಣ್ಯ ಪಾಲಕ ಜಯಪ್ರಕಾಶ್ ಉಪಸ್ಥಿತರಿದ್ದರು.