ಎಡಮಂಗಲ ಸಹಕಾರಿ ಸಂಘದ ಚುನಾವಣೆ

0

12 ಸ್ಥಾನಕ್ಕೆ 16 ಮಂದಿ ನಾಮಪತ್ರ- ಇಂದು ಅಂತಿಮ ಕಣ ಸ್ಪಷ್ಟ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಡಿ.29ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತಿಮಗೊಂಡು 12 ಸ್ಥಾನಕ್ಕೆ 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಇಂದು(ಡಿ.23)ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, ಅಂತಿಮ ಕಣ ಸಿದ್ದಗೊಂಡು ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ನಡೆಯಲಿದೆ.


ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ರಾಮಕೃಷ್ಣ ರೈ ಮಾಲೆಂಗಿರಿ,ಅವಿನಾಶ್ ದೇವರಮಜಲು, ತ್ಯಾಗರಾಜ್ ಹೆಚ್.ಎಸ್.ಹೊಸಮನೆ, ಗಿರೀಶ್ ನಡುಬೈಲು, ಕಮಲಾಕ್ಷ ಹೊಳೆಕೆರೆ, ಜಯರಾಮ ಕೆ.ಕಲ್ಲರ್ಪೆ, ಪದ್ಮನಾಭ ಪಿ.ಪುಳಿಕುಕ್ಕು ನಾಮ ಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಕಾಂತು ದೇವಸ್ಯ, ಪ.ಪಂಗಡ ಸ್ಥಾನಕ್ಕೆ ಪದ್ಮಯ್ಯ ನಾಯ್ಕ ಮುಳಿಯ, ಹಿಂದುಳಿದ ವರ್ಗ ಎ ಸ್ಥಾನಕ್ಕೆ ರಾಘವ ಪೂಜಾರಿ ಜಾಲ್ತಾರು, ಜನಾರ್ದನ ಪೂಜಾರಿ ಜಾಲ್ತಾರು , ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಪುರಂದರ ರೈ ಬಳ್ಕಾಡಿ, ಮಹಿಳಾ ಮೀಸಲು ಸ್ಥಾನಕ್ಕೆ ಶುಭದ ಎಸ್.ರೈ, ಸುಮಾ ನೂಚಿಲ , ಅರುಣಾ ಪುಳಿಕುಕ್ಕು ನಾಮ ಪತ್ರ ಸಲ್ಲಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರಕ್ಕೆ ಲಕ್ಷ್ಮಿ ನಾರಾಯಣ ಜಾಲ್ತಾರು ನಾಮಪತ್ರ ಸಲ್ಲಿಸಿದ್ದಾರೆ.


ಸಾಲಗಾರರ ಕ್ಷೇತ್ರದ 5 ಸಾಮಾನ್ಯ ಸ್ಥಾನಕ್ಕೆ 7ಮಂದಿ, ಹಿಂದುಳಿದ ವರ್ಗ ಎ ಯ ಒಂದು ಸ್ಥಾನಕ್ಕೆ 2 ಮಂದಿ, 2 ಮಹಿಳಾ ಮೀಸಲು ಸ್ಥಾನಕ್ಕೆ 3 ಮಂದಿ ಕಣದಲ್ಲಿದ್ದು, ಅವಿರೋಧ ಆಯ್ಕೆ ಅಥವಾ ಚುನಾವಣೆ ನಾಳೆ ತೀರ್ಮಾನವಾಗಲಿದೆ. ಚುನಾವಣಾಧಿಕಾರಿಯಾಗಿ ಎಂ.ಶಿವಲಿಂಗಯ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.