ಬಿದ್ದು ಸಿಕ್ಕಿದ ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವೃದ್ಧೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಗುಂಡಿಯಂಗಡಿ ಸಚಿತ್ ರೈ ಯವರ ಪುತ್ರಿಯ ಚಿನ್ನದ ಬ್ರೈಸ್ ಲೈಟ್ ವೊಂದು ಹರ್ಲಡ್ಕ ಎಂಬಲ್ಲಿ ಸುಮಾರು ಮೂರು ತಿಂಗಳ ಹಿಂದೆ ರಸ್ತೆಯಲ್ಲಿ ಬಿದ್ದು ಹೋಗಿತ್ತು. ‌ಇವರು ಎಷ್ಟೆ ಹುಡುಕಾಟ ನಡೆಸಿದ್ದರೂ ಚಿನ್ನ ಸಿಕ್ಕಿರಲಿಲ್ಲ. ಹೀಗಾಗಿ ಅವರು ಕೊರಗಜ್ಜ ದೈವಕ್ಕೆ ಹರಕೆಯನ್ನು‌ ಹೇಳಿದ್ದರು. ಇದೀಗ ಡಿ.3ರಂದು ಸರಿಯಾಗಿ ಕಣ್ಣು ಕಾಣಿಸದ ವೃದ್ಧೆಯೊಬ್ಬರು ಸೊಪ್ಪು‌ ಹೆರೆಯುತ್ತಿದ್ದಾಗ ಚಿನ್ನ ಸಿಕ್ಕಿತ್ತು. ಅದನ್ನು ಸಚಿತ್ ರವರ ಪತ್ನಿ ಶ್ರೀನಿಧಿ ರೈಯವರಿಗೆ ಪ್ರಾಮಾಣಿಕವಾಗಿ ಹಸ್ತಾಂತರಿಸಿದ್ದಾರೆ.