ಸುಳ್ಯದಲ್ಲಿ ಹರಿದ ಬ್ಯಾನರ್ ನ ಭಾಗ ವಿವೇಕಾನಂದ ಸರ್ಕಲ್ ಬಳಿ ಪತ್ತೆ: ಪೊಲೀಸರಿಂದ ವಿಚಾರಣೆ

0

ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ಇಂದು ಮುಂಜಾನೆ ಹರಿಯಲ್ಪಟ್ಟ ಶ್ರೀರಾಮ ಮಂದಿರದ ಉದ್ಘಾಟನೆಯ ಬ್ಯಾನರ್ ಭಾಗ ವಿವೇಕಾನಂದ ವೃತ್ತದ ಬಳಿ ರಸ್ತೆಯ ಬದಿಯಲ್ಲಿ ಕಂಡು ಬಂದಿದ್ದು, ಇದರ ಬಗ್ಗೆ ಮಾಹಿತಿ ತಿಳಿದ ಸುಳ್ಯ ಪೊಲೀಸರು ಘಟನೆಯನ್ನು ತೀವ್ರವಾಗಿ ಪರಿಗಣಿಸಿ ಶೋಧ ಕಾರ್ಯಕ್ಕೆ ತೊಡಗಿಕೊಂಡಿದ್ದಾರೆಂದು ತಿಳಿದುಬಂದಿದೆ.

ಪೊಲೀಸರು ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ತಿಳಿದು ಬಂದಿದೆ.

ಬ್ಯಾನರ್ ತುಂಡು ರಸ್ತೆ ಬದಿಯಲ್ಲಿ ಬಿದ್ದಿರುವ ದೃಶ್ಯವನ್ನು ಸ್ಥಳೀಯರೋರ್ವರು ವಾಟ್ಸಾಪ್ ಗ್ರೂಪಿಗೆ ಹಾಕಿದ್ದು ಅದೀಗ ವೈರಲ್ ಆಗುತ್ತಿದೆ.