ಅಡ್ಕಾರಿನಲ್ಲಿ ಹಾಕಿದ ಅಯೋಧ್ಯೆಗೆ ಶುಭಕೋರುವ ಬ್ಯಾನರ್ ಗೂ ಹಾನಿ

0

ಸುಳ್ಯದಲ್ಲಿ ಹಾಕಿದ ಅಯೋಧ್ಯಾ ಕಾರ್ಯಕ್ರಮಕ್ಕೆ ಶುಭ ಕೋರುವ ಬ್ಯಾನರ್ ಗೆ ಹಾನಿಯಾದ ಘಟನೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಅಡ್ಕಾರಿನಲ್ಲಿ ಹಾಕಿದ ಬ್ಯಾನರ್ ಗೂ ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.


ಅಡ್ಕಾರ್ ದೇವಸ್ಥಾನಕ್ಕೆ ತಿರುಗುವಲ್ಲಿ ಕಾರ್ತೀಕೇಯ ಯುವ ಸೇವಾ ಸಮಿತಿಯವರು ಅಯೋಧ್ಯೆ ಕಾರ್ಯಕ್ರಮಕ್ಕೆ ಶುಭ ಕೋರುವ ಬ್ಯಾನರ್ ಅಳವಡಿಸಿದ್ದರು. ಇಂದು ಬೆಳಿಗ್ಗೆ ನೋಡುವಾಗ ಬ್ಯಾನರ್ ನ್ನು ಹರಿದಿರುವ ಬಗ್ಗೆ ಆ ಯುವಕರಿಗೆ ತಿಳಿಯಿತು. ಸೇವಾ ಸಮಿತಿಯ ಯುವಕರೊಂದಿಗೆ ಸುಳ್ಯ ಶಾಸಕರು ಕುಳಿತಿರುವ ಚಿತ್ರದ ಬ್ಯಾನರ್ ಮಧ್ಯ ಭಾಗವನ್ನು ಕತ್ತರಿಸಿ ಕಿಡಿಗೇಡಿಗಳು ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.