ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಸಮಾಪ್ತಿ

0

ಹರಿಹರ ಪಲ್ಲತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.17 ರಿಂದ ಆರಂಭವಾದ ಧನುಪೂಜೆ ಜ. ‎14 ರ ವರಗೆ ಪ್ರತಿದಿನ ಪ್ರಾತಃಕಾಲ ಪೂಜೆಯೊಂದಿಗೆ ಸಂಪನ್ನಗೊಂಡಿತು.

ಮಕರ ಸಂಕ್ರಮಣ ದಿನ ಧನು ಪೂಜೆಯ ಕೊನೆಯ ದಿನದ ಪೂಜೆಯಾಗಿದ್ದು ಅಂದು ಬೆಳಿಗ್ಗೆ ಉಧ್ಯಾಪನಾ ಧನುಪೂಜೆ ಮಧ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕಪೂಜೆ ವನಭೋಜನ ಕಾರ್ಯಕ್ರಮ ನಡೆಯಿತು. ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡರು.