ಅಲೆಕ್ಕಾಡಿ ಶಾಲೆಯಲ್ಲಿ ಕ್ರೀಡೋತ್ಸವ

0

ಮುರುಳ್ಯ ಸ.ಉ.ಹಿ. ಪ್ರಾ ಶಾಲೆಯಲ್ಲಿ ಜ.14ರಂದು ಶಾಲೆಯಲ್ಲಿ ಪೋಷಕರಿಗೆ, ಎಸ್‌.ಡಿ.ಎಮ್.ಸಿ, ಹಿರಿಯ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ, ಕ್ರೀಡೋತ್ಸವ ನಡೆಯಿತು. ಶಾಲಾ ವಠಾರದಲ್ಲಿ ಆಶುಭಾಷಣ, ಭಾವಗೀತೆ ,ಛದ್ಮವೇಷ ಚೀಟಿ ಹೆಕ್ಕಿ ಅಭಿನಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಸಭಾ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ಅವಿನಾಶ್ ದೇವರಮಜಲುರವರು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಉಪ ತಹಶೀಲ್ದಾರು ಜನಾರ್ಧನ ಅಲೆಕ್ಕಾಡಿ, ಮುಖ್ಯ ಶಿಕ್ಷಕಿ ಶಶಿಕಲಾ ಪೂಜಾರಿ, ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಯತೀಶ್ ಪಾಳೋಳಿ ಉಪಸ್ಥಿತರಿದ್ದು ಜನಾರ್ಧನ ಪೂಜಾರಿ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಕ್ಷಕರ ಬಾಲಕೃಷ್ಣ ಪೂಜಾರಿ ನೂಜಾಡಿ ಇದ್ದರು.

ಕ್ರೀಡಾಕೂಟದ ಕೊಡುಗೆಯನ್ನು ಜನಾರ್ಧನ ಪೂಜಾರಿ ನೀಡಿದರು. ಶ್ರೀಮತಿ ಲೀಲಾವತಿ ರಾಘವ ಗೌಡ ಪಲ್ಲತ್ತಡ್ಕ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿದರು. ಶ್ರೀಮತಿ ವಾರಿಜ ದಾಮೋಧರ ಗೌಡ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಿದರು, ಎಡಮಂಗಲ ಹೈಸ್ಕೂಲ್ ದೈ.ಹಿ.ಶಿ.ಶಿಕ್ಷಕ ಪದ್ಮನಾಭ ಕೆ ., ಬಾಲಕೃಷ್ಣ ಪೂಜಾರಿ.ಕೆ., ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ ಕ್ರೀಡಾಕೂಟ ನಿರ್ವಹಣೆ ಮಾಡಿದರು , ನಳಿನಾಕ್ಷಿ ಸಭೆಯಲ್ಲಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶಶಿಕಲಾ ಸ್ವಾಗತಿಸಿ, ಶಿಕ್ಷಕಿ ಪ್ರಭಾವತಿ ವಂದಿಸಿದರು, ಎಸ್.ಡಿ.ಎಂ.ಸಿ ಯವರು ಸಹಕರಿಸಿದರು.