ಅಯೋಧ್ಯ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠೆ ಪ್ರಯುಕ್ತ

0

ಜ.22: ಪಂಜ ದೇವಳದಲ್ಲಿ ವಿಶೇಷ ಪೂಜೆ -ಭಜನಾ ಸಂಕೀರ್ತನೆ

ಅಯೋಧ್ಯ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಐವತ್ತೊಕ್ಲು, ಕೂತ್ಕುಂಜ , ಪಂಬೆತ್ತಾಡಿ ಗ್ರಾಮದ ಹಿಂದೂ ಬಾಂಧವರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮುಂಜಾನೆಯಿಂದ ದೇವಳದ ಪಾರ್ವತಿ ಸಭಾ ಭವನದಲ್ಲಿ ಭಜನಾ ಸಂಕೀರ್ತನೆ, ಉಪನ್ಯಾಸ, ಮಧ್ಯಾಹ್ನ ಪ್ರಸಾದ ವಿತರಣೆ, ರಾಮ ಭಕ್ತರಿಂದ ಅನ್ನಸಂತರ್ಪಣೆ ಜರುಗಲಿದೆ.

ಆ ಪ್ರಯುಕ್ತ ಮುಂಜಾನೆ ಪಂಜ ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಗ್ರಾಮದ ಪ್ರತಿ ಮನೆಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಘಟಕರು ವಿನಂತಿಸಿದ್ದಾರೆ.