ಶ್ರೀ ರಾಮಪೇಟೆ: ಕುಡಿತದ ಮತ್ತಿನಲ್ಲಿ ಮೋರಿಯೊಳಗೆ ನುಗ್ಗಿದ ವ್ಯಕ್ತಿ!

0

ಕುಡಿತದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಮೋರಿಯೊಳಗೆ ನುಗ್ಗಿ ಸ್ಥಳೀಯ ಜನರನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟ ಘಟನೆ ಇಂದು ಸಂಜೆ ಸುಳ್ಯದ ಶ್ರೀ ರಾಮಪೇಟೆಯಲ್ಲಿ ನಡೆದಿದೆ.

ಮುಚ್ಚಿದ್ದ ಮೋರಿಯ ಒಳಗಡೆ ಇದ್ದ ವ್ಯಕ್ತಿ ಆಟೋ ಚಾಲಕನನ್ನು ಕೈ ಸನ್ನೆಯ ಮೂಲಕ ಕರೆದು ಮೇಲೆ ಎತ್ತುವಂತೆ ಕೇಳಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಸೇರಿ ಆತನನ್ನು ಮೇಲೆತ್ತಿ ಉಪಚರಿಸಿದರು.

ಒಳಗಡೆ ಮಗು ಹಾಗೂ ಮೊಬೈಲ್ ಇದೆ ಎಂದು ಹೇಳಿ ಸ್ವಲ್ಪ ಹೊತ್ತು ಜನರು ಹುಡುಕಾಡುವಂತೆ ಮಾಡಿದರು. ಹುಡುಕಾಡಿದಾಗ ಅಲ್ಲಿ ಏನು ಇಲ್ಲದ್ದು ಕಂಡು ಬಂತು, ವ್ಯಕ್ತಿಯು ಕಂಠಪೂರ್ತಿ ಕುಡಿದಿದ್ದು
ಹೇಗೆ ಒಳ ನುಗ್ಗಿದರೆಂದು ತಿಳಿದುಬಂದಿಲ್ಲ. ಬಳಿಕ ಆತನನ್ನು ಕಾರಿನ ಮೂಲಕ ಕಳಿಸಿಕೊಡಲಾಯಿತು.