ಅರಂತೋಡು : ದುರ್ಗಾಮಾತಾ ಭಜನಾ ಮಂದಿರದಲ್ಲಿ ಮಹಾ ಚಂಡಿಕಾ ಯಾಗ , ಧಾರ್ಮಿಕ ಉಪನ್ಯಾಸ

0

ಅರಂತೋಡು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ವತಿಯಿಂದ ಶ್ರೀ ದುರ್ಗಾಮಾತಾ ಭಜನಾ ಮಂದಿರದಲ್ಲಿ ಅಂಬರೀಷ್ ಭಟ್ ಮತ್ತು ನರಸಿಂಹ ಭಟ್ ಇವರ ಸಹಬಾಗಿತ್ವದಿಂದ ಬೇಳೇರಿ ರಾಜಗೋಪಾಲ್ ಭಟ್ಟರ ನೇತೃತ್ವದಲ್ಲಿ ಮಹಾ ಚಂಡಿಕಯಾಗ ನಡೆಯಿತು.

ಮೂಡಬಿದ್ರೆ ಆಳ್ವಾಸ್ ಪ್ರತಿಸ್ಟಾನದ ಶಿಕ್ಷಕ ಸುಬ್ರಮಣ್ಯ ಐವರ್ನಾಡು ಧಾರ್ಮಿಕ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ಕಾರ್ಯಕ್ರಮಕ್ಕೆ ಭಜನಾ ಮಂಡಳಿ ಎಲ್ಲಾ ಸದಸ್ಯರು, ಅರಂತೋಡು ಕ್ರಿ. ಪ. ಸ. ಸಂಘ, ಗ್ರಾ. ಪಂ ಅರಂತೋಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ಉತ್ಪಾಧಕರ ಸಂಘ, ವಾಹನ ಚಾಲಕ ಮಾಲಕರ ಸಂಘ, ವಿಶ್ವ ಹಿಂದೂ ಪರಿಷತ್ ಭಜರಂಗಿದಳ, ಮಹಿಳಾ ಸಂಘಟನೆಗಳು ಮತ್ತು ಇತರ ಸಂಘ -ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಜನಾ ಮಂಡಳಿ ಅಧ್ಯಕ್ಷ ಕೆ. ಆರ್ ಪದ್ಮನಾಭ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತೀರ್ಥರಾಮ ವಂದಿಸಿದರು.