ಮಾಜಿ ಪ್ರಧಾನಿ ಯಚ್. ಡಿ. ದೇವೇ ಗೌಡರಿಗೆ ಪಂಜ ಜಾತ್ರೆಯ ಆಮಂತ್ರಣ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ
ಮಾಜಿ ಪ್ರಧಾನ ಮಂತ್ರಿ ಯಚ್ ಡಿ ದೇವೇ ಗೌಡರು ಜ.26ರಂದು ಭೇಟಿ ನೀಡಿದ್ದರು. ಈ ವೇಳೆ ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ನೀಡಿ ಆಶೀರ್ವಾದ ಪಡೆದರು.

ಉತ್ಸವ ಸಮಿತಿ ಸದಸ್ಯರಾದ ರಜಿತ್ ಭಟ್ ಪಂಜಬೀಡು, ರಮೇಶ್ ಕುದ್ವ ಹಾಗೂ ರಘು ಭಟ್, ಪವನ್ ಅಳ್ಪೆ ಬನ ಉಪಸ್ಥಿತರಿದ್ದರು.