ಜ.27 : ಮೇಲಿನ ಮುಕ್ಕೂರಿನಲ್ಲಿ ಜೀರ್ಣೋದ್ಧಾರ ಕುರಿತು ಪೂರ್ವಭಾವಿ ಸಭೆ

0

ಪೆರುವಾಜೆ ಗ್ರಾಮದ ಮುಕ್ಕೂರು ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ- ದೈವ ಶಕ್ತಿ ಸಾನಿಧ್ಯದ ನೆಲೆ‌ ಮೇಲಿನ ಮುಕ್ಕೂರಿನ ತರವಾಡು ಕ್ಷೇತ್ರದಲ್ಲಿ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಮಾಡುವ ಕುರಿತಂತೆ ಭಕ್ತವೃಂದದ ಪೂರ್ವಭಾವಿ ಸಭೆಯು ಜ.27 ರಂದು ಬೆಳಗ್ಗೆ 10 ಗಂಟೆಗೆ ಮೇಲಿನ ಮುಕ್ಕೂರಿನ ನಿವಾಸದಲ್ಲಿ ನಡೆಯಲಿದೆ. ಊರವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ವಸಂತ ಬೈಪಡಿತ್ತಾಯರವರು ತಿಳಿಸಿದ್ದಾರೆ.