ಕಂದ್ರಪ್ಪಾಡಿ ಸರಕಾರಿ ಶಾಲೆಯ ಶತಮಾನ ಸಂಭ್ರಮ

0

ಗುತ್ತಿಗಾರಿನಿಂದ ಕಂದ್ರಪ್ಪಾಡಿನವರೆಗೆ ಶತಮಾನದ ಓಟ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ ಶತಮಾನದ ಸಂಭ್ರಮದಲ್ಲಿದ್ದು, ಆ ಪ್ರಯುಕ್ತ ಪುರುಷರಿಗೆ ಗುತ್ತಿಗಾರಿನಿಂದ ಮತ್ತು ಮಹಿಳೆಯರಿಗೆ ಮೆಟ್ಟಿನಡ್ಕದಿಂದ ಕಂದ್ರಪ್ಪಾಡಿ ಶಾಲೆಯವರೆಗೆ ಶತಮನಾದ ಓಟ ನಡೆಯಿತು.‌

ಸಾಹಿತಿ ಎ.ಕೆ.ಹಿಮಕರ ಶತಮಾನದ ಓಟವನ್ನು ಗುತ್ತಿಗಾರಿನಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕ್ರೀಡಾ ಸಮಿತಿ ಸಂಚಾಲಕ ಜಯರಾಮ ಕಡ್ಲಾರು ಹಾಗೂ ಸಮಿತಿಯ ಸದಸ್ಯರು, ಶಾಲಾಭಿಮಾನಿಗಳು ಉಪಸ್ಥಿತರಿದ್ದು, ಶತಮಾನದ ಓಟದಲ್ಲಿ ಪಾಲ್ಗೊಂಡರು.