ಸತ್ಯಸಾಯಿ ಭಕ್ತರಿಂದ ಕೊಡಿಯಾಲದ ರಾಮ ಬೈರರವರಿಗೆ ಮನೆ ನಿರ್ಮಾಣ

0

ನೂತನ ಮನೆಯ ಗೃಹಪ್ರವೇಶ – ಮನೆ ಹಸ್ತಾಂತರ

ಸುದ್ದಿ ವರದಿ ಫಲಶ್ರುತಿ

ಕೊಡಿಯಾಲ ಗ್ರಾಮದ ಕಲ್ಪಣೆ ರಾಮ ಬೈರರವರಿಗೆ ಸತ್ಯ ಸಾಯಿ ಭಕ್ತರ ಮುಂದಾಳುತ್ವದಲ್ಲಿ ನೂತನ ಮನೆ ” ಸಾಯಿ ಆಶ್ರಯ ” ನಿರ್ಮಾಣವಾಗಿದ್ದು
ಇಂದು ಮನೆಯ ಗೃಹಪ್ರವೇಶ ಮತ್ತು ಮನೆಯ ಹಸ್ತಾಂತರ ನಡೆಯಿತು.

ಬೆಳಿಗ್ಗೆ ಸತ್ಯಸಾಯಿ ಭಕ್ತರಿಂದ ಭಜನೆ ನಡೆಯಿತು.
ಬಳಿಕ ಮನೆಯ ಕೀ ಹಸ್ತಾಂತರಿಸುವ ಮೂಲಕ ಮನೆಯ ಹಸ್ತಾಂತರ ನಡೆಯಿತು.

ಈ ಸಂದರ್ಭದಲ್ಲಿ ಸತ್ಯಸಾಯಿ ಸೇವಾ ಸಮಿತಿಯ ಕೆ.ಎನ್. ಪರಮೇಶ್ವರಯ್ಯ, ಡಾ.ಸಾಯಿಗೀತಾ ಜ್ಞಾನೇಶ್, ಡಾ‌ಎನ್.ಎ.ಜ್ಞಾನೇಶ್, ತೇಜಪ್ರಕಾಶ್ ಬುಡ್ಲೆಗುತ್ತು, ಜಯರಾಮ ಭಾರಧ್ವಾಜ್, ಸಾಯಿ ಗಿರಿಧರ್ ರೈ, ಉಮೇಶ್ ಹೂಲಿ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕೆ.ಕೆ.ನಾಯ್ಕ್ ಕೊಡಿಯಾಲ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಎಂಎಸ್. ಶಿವರಾಮ ಶಾಸ್ತ್ರಿ, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ ಬಿ.ಕೆ, ಪದ್ಮನಾಭ ಬೀಡು, ಕರುಣಾಕರ ಆಳ್ವ, ಹರೀಶ್ ಕಲ್ಪಣೆ, ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಮೊದಲಾದವರಿದ್ದರು.

ಟರ್ಪಾಲ್ ಹೊದಿಸಿದ ಮುರುಕಲು ಮನೆಯಲ್ಲಿ ವಾಸವಿದ್ದ
ರಾಮಬೈರರವರ ಮನೆಯ ಸ್ಥಿತಿಯ ಬಗ್ಗೆ ಕೆಲ ತಿಂಗಳುಗಳ ಹಿಂದೆ ಸುದ್ದಿ ಚಾನೆಲ್ ಮತ್ತು ಸುದ್ದಿ ಪತ್ರಿಕೆಯಲ್ಲಿ ವರದಿ ಪ್ರಸಾರವಾಗಿತ್ತು.


ಇದನ್ನು ಕಂಡ ಸುಳ್ಯದ ಡಾ.ಸಾಯಿಗೀತ ಮತ್ತು ಎನ್.ಎ.ಜ್ಞಾನೇಶ್ ರವರು ಸತ್ಯಸಾಯಿ ಭಕ್ತರು ಸತ್ಯಸಾಯಿ ಸೇವಾ ಸಮಿತಿ ಸದಸ್ಯರ ಸಹಕಾರ ಪಡೆದು , ದಾನಿಗಳ ನೆರವಿನೊಂದಿಗೆ ವಾಸಯೋಗ್ಯ ಮನೆ ನಿರ್ಮಿಸಿಕೊಡಲು ಮುಂದೆ ಬಂದಿದ್ದರು.
ಕೇವಲ ಆರೇ ತಿಂಗಳಲ್ಲಿ‌ ಮನೆ ನಿರ್ಮಾಣ ಕೆಲಸ ಸಂಪೂರ್ಣಗೊಂಡು ಇಂದು ಮನೆಯ ಹಸ್ತಾಂತರ ನಡೆಯಿತು.