ಕೊಳ್ತಿಗೆ : ಜಾಗದ ವಿವಾದ ಕಾರನ್ನು ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು

0

ಕೊಳ್ತಿಗೆಯಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸು ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಪ್ರಭಾ ಜಸ್ವಾಲ್ ಎಂಬವರು ಪೊಲೀಸ್ ದೂರು ನೀಡಿದ್ದು ದೂರಿನಲ್ಲಿ ಕೊಳ್ತಿಗೆ ಗ್ರಾಮದ ಸ್ಥಳಮನೆ ಎಂಬಲ್ಲಿರುವ ಸ್ಥಿರಾಸ್ತಿಯನ್ನು ನನ್ನ ಸಹೋದರ ಸಹೋದರಿಯರಿಗೆ ಪಾಲು ಮಾಡಿಕೊಡುವ ಇರಾದೆಯಿಂದ ಜ.29 ರಂದು ಬೆಳಿಗ್ಗೆ ಬಾಡಿಗೆ ಕಾರಿನಲ್ಲಿ ನಾನು ಮತ್ತು ಭಾವ ಎಸ್ ರವೀಂದ್ರ ರೈ ಯವರೊಂದಿಗೆ ಉಡುಪಿಯಿಂದ ಕೊಳ್ತಿಗೆ ಗ್ರಾಮದ ಸ್ಥಳಮನೆ ಬಂದು ತಾಲೂಕು ಸರ್ವೆಯರ್ ಮೂಲಕ ಭಾವನವರ ಪಿತ್ರಾರ್ಜಿತ ಆಸ್ತಿಯನ್ನು ಸರ್ವೆ ಮಾಡಿ ಮುಗಿಸಿಕೊಂಡು ಅಲ್ಲಿಂದ ಸಂಜೆ ವಾಪಾಸ್ ಉಡುಪಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಸ್ಥಳ ಮನೆ ಬಳಿ ಕಾರಿನಲ್ಲಿ ಹೋಗುತ್ತಿರುವಾಗ ಆರೋಪಿತರಾದ ಚಿತ್ರಪ್ರಭಾ ರೈ, ಅವರ ಗಂಡ ರಾಜೇಶ್ ಶೆಟ್ಟಿ. ಮಕ್ಕಳಾದ ಸಂಪತ್ ರೈ ಮತ್ತು ಸಂಕೇತ್ ರವರು ಬಿಳಿ ಬಣ್ಣ ವ್ಯಾಗನರ್ ಕಾರು ನಂಬ್ರ ಕೆಎ-19-ಎಂ.ಎಫ್-5999 ನೇಯದರಲ್ಲಿ ನಮ್ಮ ಎದುರು ಭಾಗದಿಂದ ಬಂದು ನಮ್ಮ ಕಾರನ್ನು ಅಡ್ಡಗಟ್ಟಿ ಆರೋಪಿತರು ಕಾರಿನಿಂದ ಇಳಿದು ಕಾರಿನ ಬಳಿ ಬಂದು ನನ್ನನ್ನು ಮತ್ತು ಭಾವನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ಜೀವ ಬೆದರಿಕೆ ಒಡ್ಡಿದ್ದು ನಾನು ಮಹೇಶ್ ಶೆಟ್ಟಿ ತಿಮರೋಡಿಯ ಖಾಸ ಜನ.ನಿಮ್ಮನ್ನು ಸೌಜನ್ಯ ಕೊಲೆಪ್ರಕರಣದಲ್ಲಿ ಸಿಲುಕಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಬೆದರಿಸಿರುವುದಾಗಿ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.