ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ಲಕ್ಕಿ ಡಿಪ್ ಬಿಡುಗಡೆ

0

ಶ್ರೀ ಮಹಾ ವಿಷ್ಣು ದೇವಸ್ಥಾನ ನಿಡ್ವಾಳ ಇದರ ಪುನರ್ ನಿರ್ಮಾಣ ಪ್ರಯುಕ್ತ ಹಣ ಸಂಗ್ರಹಣೆಗಾಗಿ ರೂಪಾಯಿ 50 ಮೌಲ್ಯದ ಲಕ್ಕಿಡಿಪ್ ನ್ನು ಫೆ.4 ರಂದು ಶ್ರೀ ದೇಗುಲದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಗೊಳಿಸಲಾಯಿತು.

ಪಂಜ ಶ್ರೀ ಸದಾಶಿವ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ .ದೇವಿಪ್ರಸಾದ್ ಕಾನತ್ತೂರ್ ಹಾಗೂ ದುಬೈಯ ಉದ್ಯಮಿ ಹಾಗೂ ಬಿಲ್ಲವ ಸಂಘದ ಮುಖ್ಯಸ್ಥ ಜಗನ್ನಾಥ ಬೆಳ್ಳಾರೆ ಇವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರ ಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾದರ ಕರಿಮಜಲು, ಸಂಚಾಲಕರಾದ ಅಶೋಕ್ ಮೇಲ್ಪಾಡಿ, ಭರತ್ ರಾಮತೋಟ, ಬಾಲಕೃಷ್ಣ ಕರಿಕಳ, ಶರತ್ ಪುರಿಯ, ಚರಿತ್ ಕಂಬಳ, ವಸಂತ ಮೇಲ್ಪಾಡಿ, ಪುರುಷೋತ್ತಮ ಮೇಲ್ಪಾಡಿ, ಹರೀಶ್ ಪುರಿಯ, ದೇಗುಲದ ಸಿಬ್ಬಂಧಿ ಪ್ರಶಾಂತ್ ಅಲೆಂಗಾರ, ಆಡಳಿತ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ
ಮೊದಲಾದವರು ಉಪಸ್ಥಿತರಿದ್ದರು.

ಈಗಾಗಲೇ ಗರ್ಭಗುಡಿ ಹಾಗೂ ತೀರ್ಥ ಮಂಟಪದ ಕೆಲಸ ಕಾರ್ಯಗಳು ಪೂರ್ತಿಯಾಗಿದ್ದು ಮುಂದೆ ಸತ್ತುಪೌಳಿ, ಗಣಪತಿ ಗುಡಿ, ಅನ್ನ ಛತ್ರ ಮೊದಲಾದ ಕೆಲಸ ಕಾರ್ಯಗಳು ಕೆಲಸ ಕಾರ್ಯಗಳನ್ನು ನಡೆಯ ಬೇಕಾಗಿರುವ ಕಾರಣ ಭಕ್ತಾದಿಗಳು ಅತ್ಯಂತ ಹೆಚ್ಚಿನ ಧನ ಸಹಾಯ ನೀಡಬೇಕೆಂದು ಸಮಿತಿಯವರು ವಿನಂತಿಸಿದ್ದಾರೆ.